ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ರಿಷ್ಯಂತ್, 'ಪೊಲೀಸರ ಕೆಲಸದ ಏಕತಾನತೆ ಮುರಿಯಲು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಹುತೇಕ ಮಂದಿ ಪೊಲೀಸರು ಅತ್ಯುತ್ಸಾಹದಿಂದ ಬೆಟ್ಟ ಹತ್ತಿದ್ದಾರೆ. ಒತ್ತಡದಿಂದ ಮುಕ್ತರಾಗಲು ಈ ಬಗೆಯ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು' ಎಂದು ತಿಳಿಸಿದರು.