ಒಟ್ಟು 16 ಹುದ್ದೆಗಳಿಗೆ 41 ಮಂದಿ ಸ್ಪರ್ಧಿಸಿದ್ದರು. 2,244 ಸದಸ್ಯರು ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್.ಆನಂದ, ಎಸ್.ಆನಂದಕುಮಾರ್, ಬಿ.ಎಸ್.ಪ್ರಶಾಂತ್, ವಿ.ಶಾರದಾ, ಕೆ.ಟಿ.ಸುರೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ದೊರೆಸ್ವಾಮಿ, ಎಚ್.ಬಸವರಾಜಪ್ಪ, ಡಿ.ಮಂಜುನಾಥ, ಎಸ್.ಎಸ್.ವೈದ್ಯನಾಥ, ಎಸ್.ಜಿ.ಶಿವಣ್ಣೇಗೌಡ, ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಉಮೇಶ್, ಎಚ್.ಕೆ.ಕೃಷ್ಣ, ಬಿ.ಶಿವಣ್ಣ, ಎ.ಜಿ.ಸುಧೀರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಆರ್.ಗೋಪಾಲೇಗೌಡ, ಸಿ.ಕೆ.ರುದ್ರಮೂರ್ತಿ, ಜಂಟಿ ಕಾರ್ಯದರ್ಶಿ ಮಹಿಳಾ ಮೀಸಲು ಸ್ಥಾನಕ್ಕೆ ಉಮಾದೇವಿ, ಎಂ.ಮನೋನ್ಮಣಿ ಹಾಗೂ ಕೆ.ಎಸ್.ಸವಿತಾ, ಖಜಾಂಜಿ ಸ್ಥಾನಕ್ಕೆ ಜೆ.ಪಿ.ಚಂದ್ರಶೇಖರ್, ಎಚ್.ಎಸ್.ಮಹದೇವಸ್ವಾಮಿ ಹಾಗೂ ಎಂ.ಎಸ್.ಶರತ್ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು.