ಅನ್ಯಧರ್ಮೀಯರು ಪೂಜೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಮಠದ ಆವರಣದಲ್ಲಿರುವ ಶಿವ ದೇಗುಲಕ್ಕೆ ಬೀಗ ಹಾಕಿದರು. ಈ ವೇಳೆ ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ದಿವಾಕರ್, ‘ಈ ರೀತಿ ಮಾಡುವುದು ತಪ್ಪು. ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದರು. ಈ ಹಂತದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯಿತು.