‘ಬಡವರ ನೋವು ಅರಿತಿದ್ದರು. ಎಲ್ಲವನ್ನೂ ತನ್ನ ಮೈಮೇಲೆ ಹಾಕಿಕೊಳ್ಳುವ ಸ್ವಭಾವ ಅವರದ್ದಾಗಿತ್ತು. ಹಲ ಖ್ಯಾತನಾಮರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಮುದ್ದುಕೃಷ್ಣ ಅವರಿಗೆ ಸಲ್ಲುತ್ತದೆ. ಸಂಗೀತದ ಸೂಕ್ಷ್ಮ ಪ್ರಜ್ಞೆ ಇಲ್ಲದಿದ್ದರೂ; ಸಂಗೀತವನ್ನು ಪ್ರೀತಿಸಿದರು. ಯಾರೊಬ್ಬರ ಶಿಷ್ಯತ್ವ ಪಡೆದವರಲ್ಲ. ಯಾರಿಗೂ ಕೇಡು ಬಯಸದವ. ಬದುಕಿನ ಎಲ್ಲ ಆಯಾಮ, ಕ್ಷೇತ್ರಗಳಲ್ಲೂ ಪ್ರೀತಿಯಿಂದ ತೊಡಗಿಸಿಕೊಂಡವರು. ಎಲ್ಲರನ್ನೂ ಪ್ರೀತಿಸಿದವರು’ ಎಂದು ಉಮೇಶ್ ಒಡನಾಡಿಯ ಅಂತರಂಗವನ್ನು ನುಡಿನಮನದಲ್ಲಿ ಬಿಚ್ಚಿಟ್ಟರು.