ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಖಾನೆ–ಕಾರ್ಮಿಕ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಕೃಷಿ ಕೂಲಿಕಾರರ ಪರವಾದ ಕಾಯ್ದೆ ಜಾರಿಗೊಳಿಸಬೇಕು. ರೈಲ್ವೆ, ವಿಮಾ ವಲಯದ ಖಾಸಗೀಕರಣ ಬೇಡ. ಸಾರ್ವಜನಿಕ ವಲಯ, ರಕ್ಷಣಾ ವಲಯವನ್ನು ಉಳಿಸಿ. ಬ್ಯಾಂಕ್ಗಳ ವಿಲೀನಕ್ಕೆ ತಡೆ ಹಾಕಿ. ಕೇಂದ್ರ–ರಾಜ್ಯ ಸರ್ಕಾರ ಘೋಷಿಸಿದ ಸಹಾಯಧನವನ್ನು ಎಲ್ಲ ವರ್ಗದ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.