ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆ, ವಚನ ಗಾಯನವನ್ನು ಗಾಯತ್ರಿ ಶ್ರೀಧರ್ ಪ್ರಸ್ತುತಪಡಿಸಿದರೆ, ಅನಿರುದ್ಧ್ ಐತಾಳ್, ಸಂಧ್ಯಾ ಭಟ್, ಶ್ರೀಮತಿದೇವಿ, ಸುಮಿತ್ರಾ ಕಾಡದೇವರಮಠ ಅವರು ಸುಶ್ರಾವ್ಯವಾಗಿ ವಿವಿಧ ಹಾಡುಗಳನ್ನು ಹಾಡಿದರು. ವಿದ್ವಾನ್ ಎನ್.ಶ್ರೀನಾಥ್ ಕರ್ನಾಟಕ ಸಂಗೀತ ಪ್ರಸ್ತುತಪಡಿಸಿದರು. ಎಸ್ಜಿಪಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಮೂಹ ತಬಲಾ ವಾದನ ನಡೆಸಿಕೊಟ್ಟರು. ಹೇಮಂತ್ ಜೋಷಿ ಅವರಿಂದ ತಬಲಾ ವಾದನ ಕಾರ್ಯಕ್ರಮವೂ ನಡೆಯಿತು.