ಹುಣಸೂರು: ನಾಗರಹೊಳೆ ಅರಣ್ಯದಂಚಿನ ಮುದಗನೂರು ಗ್ರಾಮದ ಸುಭಾಷ್ ಅವರ ಜಮೀನಿನ ಕಲ್ಲು ಬಂಡೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಅದನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಗ್ರಾಮದ ಸುಭಾಷ್ ಅವರ ಮನೆಯ ದನಗಾಹಿ ಕುಬೇರ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಸಮಯದಲ್ಲಿ ಕಲ್ಲು ಬಂಡೆಯ ಕೊರಕಲಿನಲ್ಲಿ ಹೆಬ್ಬಾವು ಕಂಡಿದೆ. ಈ ವಿಷಯವನ್ನು ಅರಣ್ಯಾಧಿಕಾರಿಗಳಾದ ಸುಭಾಷ್ ಮತ್ತು ಚಂದ್ರೇಶ್ ಅವರಿಗೆ ತಿಳಿಸಿದಾಗ ಸಿಬ್ಬಂದಿ ಸ್ಥಳಕ್ಕೆ ಬಂದು ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.