ಕದಂಬರ ಗೆಳೆಯರು, ಒಡನಾಡಿಗಳು, ಅಭಿಮಾನಿಗಳು ಸೇರಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು ರಾಜಶೇಖರ ದಂಪತಿ ಅಭಿನಂದಿಸಿದರು. ಹತ್ತಾರು ಹಾರಗಳು, ವಿವಿಧ ನಮೂನೆಯ ಹಲವು ಪೇಟ ಕದಂಬ ದಂಪತಿಯ ಕೊರಳು, ತಲೆಯನ್ನು ಅಲಂಕರಿಸಿದವು. ಸ್ಮರಣಿಕೆ ಕೈ ತುಂಬಿದವು. ಹಣ್ಣಿನ ಬುಟ್ಟಿಗಳು ರಾಶಿಯಾದವು.