ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಮನಹಳ್ಳಿ: ಹೋಟೆಲಿಗೆ ಬಹಿಷ್ಕಾರ– ದೂರು

Last Updated 24 ಡಿಸೆಂಬರ್ 2018, 14:14 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಮ್ಮನಹಳ್ಳಿಯ ಹೋಟೆಲಿಗೆ ಜನರು ಬಾರದಂತೆ ಅಣ್ಣನ ಕುಮ್ಮಕ್ಕಿನಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್ ಮಾಲೀಕ ನಾಗರಾಜು ಹಾಗೂ ಅಣ್ಣ ಶಿವರಾಜ್ ನಡುವೆ ಆಸ್ತಿ ವಿವಾದವಿತ್ತು. ಈ ಕುರಿತು ನಾಗರಾಜು ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇದರಿಂದ ಕೋಪಗೊಂಡ ಶಿವರಾಜ್‌ ಹೋಟೆಲಿಗೆ ಯಾರೂ ಹೋಗದಂತೆ ಊರಿನವರಿಗೆ ಧಮಕಿ ಹಾಕಿದ್ದಾರೆ ಎಂದು ನಾಗರಾಜು ದೂರಿನಲ್ಲಿ ತಿಳಿಸಿದ್ದಾರೆ.

ನಾಗರಾಜು ಪರ ನ್ಯಾಯಾಲಯದಲ್ಲಿ ಯಾರೂ ಸಾಕ್ಷಿ ಹೇಳಬಾರದು, ಹೋಟೆಲಿಗೆ ಹೋಗಬಾರದು ಎಂದು ಶಿವರಾಜ್‌ ಊರಿನವರನ್ನು ಹೆದರಿಸಿದ್ದಾರೆ ಎಂದು ನಾಗರಾಜ್ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT