<p><strong>ಮೈಸೂರು: </strong>ವಸಾಹತುಶಾಹಿ ಸಂಶೋಧನಾ ವಿಧಾನಗಳ ಬದಲಿಗೆ ಪರ್ಯಾಯ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್ ಅಸಾದಿ ತಿಳಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ಇಲ್ಲಿನ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ಸಮಾಜವಿಜ್ಞಾನಗಳ ವಿಭಾಗಗಳನ್ನು ಮುಚ್ಚಬೇಕು ಎಂದು ಜಪಾನ್ ಸರ್ಕಾರ ಪ್ರಸ್ತಾಪ ಮಾಡಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಹ ಇದೇ ಬಗೆಯಲ್ಲಿ ಪ್ರತಿಪಾದಿಸಿಯೂ ಇದ್ದರು. ಸಮಾಜವಿಜ್ಞಾನವೇ ಆಗಲಿ, ಸಂಶೋಧನೆಗಳೇ ಆಗಲಿ ಹೊಸ ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದಲ್ಲಿ ಈ ರೀತಿಯ ಅಭಿಪ್ರಾಯಗಳು ಮೂಡುತ್ತವೆ ಎಂದರು.</p>.<p>ಹಳೆಯ ಸಿದ್ಧಾಂತಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಹೋದರೆ ಪ್ರಯೋಜನ ಇಲ್ಲ. ಹಳೆಯದನ್ನು ವಿಮರ್ಶಿಸುವ, ಇದಕ್ಕೆ ಪರ್ಯಾಯವನ್ನು ಹುಟ್ಟು ಹಾಕುವ ಪ್ರಕ್ರಿಯೆಗಳು ನಡೆಯಬೇಕು. ಆಗ ಸಂಶೋಧನೆಗಳೇ ಆಗಲಿ, ಸಾಮಾಜಿಕವಿಜ್ಞಾನಗಳೇ ಆಗಲಿ ಜೀವಂತಿಕೆ ಪಡೆಯುತ್ತವೆ ಎಂದು ತಿಳಿಸಿದರು.</p>.<p>ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ</p>.<p>ತದೇಕಚಿತ್ತದಿಂದ ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ತಿಳಿಸಿದರು.</p>.<p>ಧಾರವಾಡದ ಹಳ್ಳಿಗಳಲ್ಲಿ ಸುಮಾರು 40 ದಿನಗಳ ಕಾಲ ಇದ್ದು, ಅಲ್ಲಿಯ ಜನರ ಮಾತುಗಳನ್ನು, ಕಥೆಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಕಲಿತಷ್ಟು ಪಿಎಚ್ಡಿ ಅಥವಾ ಕಾಲೇಜಿನಲ್ಲಿ ಕಲಿಯಲಿಲ್ಲ ಎಂದು ಹೇಳಿದರು.</p>.<p>ಸಹನೆ ಮತ್ತು ತಾಳ್ಮೆ ಎಲ್ಲರಿಗೂ ಇರಬೇಕು. ಸಂಶೋಧಕರಿಗಂತೂ ಇದು ಹೆಚ್ಚಾಗಿರಬೇಕು. ಆಗ ಮಾತ್ರ ಉತ್ತಮ ಸಂಶೋಧನೆ ಮಾಡಲು ಸಾಧ್ಯ ಎಂದು ವಿವರಿಸಿದರು.</p>.<p>ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ವಸಾಹತುಶಾಹಿ ಸಂಶೋಧನಾ ವಿಧಾನಗಳ ಬದಲಿಗೆ ಪರ್ಯಾಯ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್ ಅಸಾದಿ ತಿಳಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ಇಲ್ಲಿನ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ಸಮಾಜವಿಜ್ಞಾನಗಳ ವಿಭಾಗಗಳನ್ನು ಮುಚ್ಚಬೇಕು ಎಂದು ಜಪಾನ್ ಸರ್ಕಾರ ಪ್ರಸ್ತಾಪ ಮಾಡಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಹ ಇದೇ ಬಗೆಯಲ್ಲಿ ಪ್ರತಿಪಾದಿಸಿಯೂ ಇದ್ದರು. ಸಮಾಜವಿಜ್ಞಾನವೇ ಆಗಲಿ, ಸಂಶೋಧನೆಗಳೇ ಆಗಲಿ ಹೊಸ ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದಲ್ಲಿ ಈ ರೀತಿಯ ಅಭಿಪ್ರಾಯಗಳು ಮೂಡುತ್ತವೆ ಎಂದರು.</p>.<p>ಹಳೆಯ ಸಿದ್ಧಾಂತಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಹೋದರೆ ಪ್ರಯೋಜನ ಇಲ್ಲ. ಹಳೆಯದನ್ನು ವಿಮರ್ಶಿಸುವ, ಇದಕ್ಕೆ ಪರ್ಯಾಯವನ್ನು ಹುಟ್ಟು ಹಾಕುವ ಪ್ರಕ್ರಿಯೆಗಳು ನಡೆಯಬೇಕು. ಆಗ ಸಂಶೋಧನೆಗಳೇ ಆಗಲಿ, ಸಾಮಾಜಿಕವಿಜ್ಞಾನಗಳೇ ಆಗಲಿ ಜೀವಂತಿಕೆ ಪಡೆಯುತ್ತವೆ ಎಂದು ತಿಳಿಸಿದರು.</p>.<p>ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ</p>.<p>ತದೇಕಚಿತ್ತದಿಂದ ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ತಿಳಿಸಿದರು.</p>.<p>ಧಾರವಾಡದ ಹಳ್ಳಿಗಳಲ್ಲಿ ಸುಮಾರು 40 ದಿನಗಳ ಕಾಲ ಇದ್ದು, ಅಲ್ಲಿಯ ಜನರ ಮಾತುಗಳನ್ನು, ಕಥೆಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಕಲಿತಷ್ಟು ಪಿಎಚ್ಡಿ ಅಥವಾ ಕಾಲೇಜಿನಲ್ಲಿ ಕಲಿಯಲಿಲ್ಲ ಎಂದು ಹೇಳಿದರು.</p>.<p>ಸಹನೆ ಮತ್ತು ತಾಳ್ಮೆ ಎಲ್ಲರಿಗೂ ಇರಬೇಕು. ಸಂಶೋಧಕರಿಗಂತೂ ಇದು ಹೆಚ್ಚಾಗಿರಬೇಕು. ಆಗ ಮಾತ್ರ ಉತ್ತಮ ಸಂಶೋಧನೆ ಮಾಡಲು ಸಾಧ್ಯ ಎಂದು ವಿವರಿಸಿದರು.</p>.<p>ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>