ಪಿರಿಯಾಪಟ್ಟಣ: ತಾಲ್ಲೂಕಿನ ಅರೇನಹಳ್ಳಿ ಗ್ರಾಮದ ಶ್ರೀಗಂಧದ ನೆಡು ತೋಪಿನಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ.
ಹುಣಸೂರು ತಾಲ್ಲೂಕಿನ ಬೀರತಮ್ಮನಹಳ್ಳಿ ಹಾಡಿಯ ಮಹದೇವ ಬಂಧಿತ ಆರೋಪಿ. ಇನ್ನುಳಿದ ಆರು ಜನ ಆರೋಪಿಗಳಾದ ಬೀರತಮ್ಮನಹಳ್ಳಿ ಹಾಡಿಯ ಪುಟ್ಟಯ್ಯ, ಮುತ್ತ, ಚಿಕ್ಕಮಾರ, ಬಸವರಾಜು, ಬೈರವ, ಬಲಮಾರ ಪರಾರಿಯಾಗಿದ್ದಾರೆ.
ಬಂಧಿತನಿಂದ 20 ಕೆ.ಜಿ ತೂಕದ 13 ಶ್ರೀಗಂಧದ ತುಂಡುಗಳು, ಒಂದು ಚಾಕು, ಒಂದು ಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.