ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಜುಲೈ 21ರಿಂದ ಆಗಸ್ಟ್ 19ರವರೆಗೆ ಪ್ರತಿ ದಿನ ಸಂಜೆ ‘ವಚನ ಚಿಂತನ’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ. ಸಂಜೆ 6.30ಕ್ಕೆ ಪ್ರಾರ್ಥನೆ, 6.45ಕ್ಕೆ ಪ್ರವಚನ, 7.15ಕ್ಕೆ ಶಾಂತಿ ಮಂತ್ರ ಮತ್ತು ಮಹಾಮಂಗಳಾರತಿ ನಡೆಯಲಿದೆ.