ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್ ಅಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಇತಿಹಾಸ ಅಧ್ಯಯನವು ಬಲು ಶ್ರೇಷ್ಠವಾದ ಕ್ಷೇತ್ರ. ಆದರೆ, ಭಾರತದಲ್ಲಿ ಇತಿಹಾಸ ಬರೆದವರು ಟಿಪ್ಪುವನ್ನು ವಿವಾದಕ್ಕೆ ಸಿಲುಕಿಸಿದ್ದಾರೆ. ಟಿಪ್ಪುವಿನ ಆಡಳಿತ, ಸಾಮಾಜಿಕ, ಆರ್ಥಿಕ ಚಿಂತನೆಗಳು ಶ್ರೇಷ್ಠವಾದವು. ಹಾಗಾಗಿ, ಟಿಪ್ಪು ಅಧ್ಯಯನ ನನಗೆ ಅಚ್ಚುಮೆಚ್ಚು. ಟಿಪ್ಪು ಅಧ್ಯಯನ ಕೇಂದ್ರವು ಜವಾಬ್ದಾರಿಯಿಂದ ಕೆಲಸ ಮಾಡಲಿ. ಇಂತಹ ಮತ್ತಷ್ಟು ಕಮ್ಮಟಗಳು ನಡೆಯಲಿ’ ಎಂದು ಸಲಹೆ ನೀಡಿದರು.