‘ಟಿಪ್ಪು ಯಾವುದೇ ಒಂದು ಪಕ್ಷ, ಜಾತಿಗೆ ಸೀಮಿತರಲ್ಲ. ಸ್ವಾತಂತ್ರ್ಯ ಸೇನಾನಿ. ಮೈಸೂರಿನ ಹೆಮ್ಮೆ. ನಾವೂ ಸಹ ಈ ಘನತೆ ಎತ್ತಿ ಹಿಡಿಯಲಿಕ್ಕಾಗಿಯೇ ಟಿಪ್ಪು ಜಯಂತಿ ಜತೆ, ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಹಿಂದೆ ಹಾಗೂ ಮುಂದೆಯೂ ಸಹ ವಿವಿಧ ಕಾರ್ಯಕ್ರಮಗಳಿಗಾಗಿ ಬಾಡಿಗೆ ನೀಡಲಿಕ್ಕಾಗಿಯೇ ಇರುವ ಪಂಜಿನ ಕವಾಯತು ಮೈದಾನವನ್ನು ಯಾವ ಕಾರಣಕ್ಕಾಗಿ ಇದೀಗ ನೀಡುತ್ತಿಲ್ಲ ಎಂಬ ರಹಸ್ಯವನ್ನು ಬಹಿರಂಗಗೊಳಿಸಿ’ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.