ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಮರಗಳಿಗೆ ಮೊಳೆ ಹೊಡೆಯುವುದು ಅಪರಾಧ. ಮರಗಳಿಗೂ ಜೀವವಿದ್ದು, ಮೊಳೆಯಿಂದ ಪೆಟ್ಟು ಬೀಳುತ್ತದೆ. ಕೆಲವು ಮರಗಳು ಪೆಟ್ಟಿನ ಗಾಯವನ್ನು ತಾವೇ ವಿವಿಧ ರಾಸಾಯನಿಕಗಳನ್ನು ಹೊರಹೊಮ್ಮಿಸುವ ಮೂಲಕ ವಾಸಿ ಮಾಡಿಕೊಳ್ಳುತ್ತವೆ. ಆದರೆ, ಈ ಪ್ರಯತ್ನದಲ್ಲಿ ಮರಗಳ ಬೆಳವಣಿಗೆ ಕುಂಟುತ್ತದೆ. ಕೆಲವು ಮರಗಳು ಮೊಳೆಯಿಂದ ಉಂಟಾಗುವ ರಂಧ್ರಗಳಿಂದ ಶಿಲೀಂಧ್ರ ಸೋಂಕಿಗೆ ಒಳಗಾಗಿ, ಕ್ರಮೇಣ ಬೇರು ಸತ್ತು ನೆಲಕ್ಕುರಳುತ್ತವೆ.