‘ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ, ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜಿಲ್ಲೆಯ ಸಂಪೂರ್ಣ ನೀರಾವರಿಗಾಗಿ, ಸ್ವಾರ್ಥ ಬದಿಗಿಟ್ಟು ಸಹಕಾರ ಕೊಟ್ಟಿದ್ದೇವೆ. ಆದರೂ ಹೋದ ಎಲ್ಲೆಡೆ ಪತ್ರಕರ್ತರಷ್ಟೇ ಈ ವಿಷಯವನ್ನು ಪದೇ ಪದೇ ಏಕೆ ಕೇಳುತ್ತಾರೆ ಎಂಬುದೇ ಗೊತ್ತಾಗ್ತಿಲ್ಲ’ ಎಂದು ಬುಧವಾರ ರಾತ್ರಿ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಬೇಸರ ವ್ಯಕ್ತಪಡಿಸಿದರು.