ಮೈಸೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಎರಡು ಕಡೆ ಕಾಡಾನೆಗಳು ದಾಳಿ ನಡೆಸಿ ರೈತರ ಬೆಳೆಯನ್ನು ನಾಶಪಡಿಸಿವೆ. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಪೆಂಜಳ್ಳಿ ಗ್ರಾಮ ಹಾಗೂ ನಂಜನಗೂಡು ತಾಲ್ಲೂಕಿನ ಯಡಿಯಾಲ ವಲಯದ ಮಡುವಿನಹಳ್ಳಿಯಲ್ಲಿ ಈ ದಾಳಿ ನಡೆದಿದೆ.
ಅನೆದಾಳಿಯಿಂದ ಕೋಪಗೊಂಡಿರುವ ಮಡುವಿನಹಳ್ಳಿಯ ರೈತರು ವಿಷದ ಬಾಟಲಿ ಹಿಡಿದು ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ರೇಲ್ವೆ ಹಳಿ ತಡೊಗೋಡೆ ಅಲ್ಲಲ್ಲಿ ಮುರಿದಿರುವುದು, ಅಪೂರ್ಣಗೊಂಡಿರುವುದರಿಂದ ಆನೆಗಳು ಸುಲಭವಾಗಿ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೆಂಜನಹಳ್ಳಿಗೆ ಬಂದಿದ್ದ ಎರಡು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿದ್ದಾರೆ.