<p><strong>ಮೈಸೂರು</strong>: ಇಲ್ಲಿನ ಪರಿವರ್ತನಾ ಬಿಸಿನೆಸ್ ಶಾಲೆಯಲ್ಲಿ ಅಭ್ಯುದಯ–2026 ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು.</p>.<p>ಅಭ್ಯುದಯ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ನಾವೀನ್ಯತೆ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವ್ಯಾವಹಾರಿಕ ನೈಪುಣ್ಯದ ಜೊತೆಗೆ ಅಭಿವೃದ್ಧಿ ಪಡಿಸಿಕೊಳ್ಳಲು ಪ್ರೇರೇಪಿಸಲಾಯಿತು. </p>.<p>ಆಹಾರ, ಉಡುಪುಗಳು, ಆಟಗಳ ಮಳಿಗೆಗಳು ಇದ್ದವು. ಸೃಜನಾತ್ಮಕ ಉದ್ಯಮಿಕ ಚಟುವಟಿಕೆ ಒಳಗೊಂಡ ವಿವಿಧ ಉತ್ಪನ್ನಗಳು ಮತ್ತು ಸೇವೆಗಳು ಪ್ರದರ್ಶಿಸಲ್ಪಟ್ಟವು.</p>.<p>ಸಂಸ್ಥೆಯ ಅಧ್ಯಕ್ಷ ಎಂ.ಪುಟ್ಟೇಗೌಡ, ನಿರ್ವಹಣಾ ಟ್ರಸ್ಟಿ ಬಿ.ವಿ.ಕುಮಾರ್, ನಿರ್ವಹಣಾ ನಿರ್ದೇಶಕ ಮಂಜುರಾಂ ಪುಟ್ಟೇಗೌಡ, ಟ್ರಸ್ಟಿ ಧನಂಜಯ ಕೆ.ಬಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಓಂ ಶ್ರೀನಿಕೇತನ ಟ್ರಸ್ಟ್ನ ಅಕಾಡೆಮಿಕ್ ನಿರ್ದೇಶಕ ಪ್ರೊ.ಎನ್.ರಾಮು, ಪರಿವರ್ತನಾ ಕಾನೂನು ಕಾಲೇಜಿನ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ ಶೈಕ್ಷಣಿಕ ಮಾರ್ಗದರ್ಶನ ನೀಡಿದರು.</p>.<p>ಮುಖ್ಯ ಅತಿಥಿಗಳಾಗಿ ಡಾ.ಐಶ್ವರ್ಯಾ ರಾಧಾಕೃಷ್ಣ, ಮದರ್ಹುಡ್ ಆಸ್ಪತ್ರೆ ಮತ್ತು ಅಕ್ಷಯ ಪ್ರಾಪರ್ಟೀಸ್ ನಿರ್ದೇಶಕ ಸಚಿನ್ ಮಂಜುನಾಥ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಜಿ.ರಘುನಂದನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ಪರಿವರ್ತನಾ ಬಿಸಿನೆಸ್ ಶಾಲೆಯಲ್ಲಿ ಅಭ್ಯುದಯ–2026 ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು.</p>.<p>ಅಭ್ಯುದಯ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ನಾವೀನ್ಯತೆ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವ್ಯಾವಹಾರಿಕ ನೈಪುಣ್ಯದ ಜೊತೆಗೆ ಅಭಿವೃದ್ಧಿ ಪಡಿಸಿಕೊಳ್ಳಲು ಪ್ರೇರೇಪಿಸಲಾಯಿತು. </p>.<p>ಆಹಾರ, ಉಡುಪುಗಳು, ಆಟಗಳ ಮಳಿಗೆಗಳು ಇದ್ದವು. ಸೃಜನಾತ್ಮಕ ಉದ್ಯಮಿಕ ಚಟುವಟಿಕೆ ಒಳಗೊಂಡ ವಿವಿಧ ಉತ್ಪನ್ನಗಳು ಮತ್ತು ಸೇವೆಗಳು ಪ್ರದರ್ಶಿಸಲ್ಪಟ್ಟವು.</p>.<p>ಸಂಸ್ಥೆಯ ಅಧ್ಯಕ್ಷ ಎಂ.ಪುಟ್ಟೇಗೌಡ, ನಿರ್ವಹಣಾ ಟ್ರಸ್ಟಿ ಬಿ.ವಿ.ಕುಮಾರ್, ನಿರ್ವಹಣಾ ನಿರ್ದೇಶಕ ಮಂಜುರಾಂ ಪುಟ್ಟೇಗೌಡ, ಟ್ರಸ್ಟಿ ಧನಂಜಯ ಕೆ.ಬಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಓಂ ಶ್ರೀನಿಕೇತನ ಟ್ರಸ್ಟ್ನ ಅಕಾಡೆಮಿಕ್ ನಿರ್ದೇಶಕ ಪ್ರೊ.ಎನ್.ರಾಮು, ಪರಿವರ್ತನಾ ಕಾನೂನು ಕಾಲೇಜಿನ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ ಶೈಕ್ಷಣಿಕ ಮಾರ್ಗದರ್ಶನ ನೀಡಿದರು.</p>.<p>ಮುಖ್ಯ ಅತಿಥಿಗಳಾಗಿ ಡಾ.ಐಶ್ವರ್ಯಾ ರಾಧಾಕೃಷ್ಣ, ಮದರ್ಹುಡ್ ಆಸ್ಪತ್ರೆ ಮತ್ತು ಅಕ್ಷಯ ಪ್ರಾಪರ್ಟೀಸ್ ನಿರ್ದೇಶಕ ಸಚಿನ್ ಮಂಜುನಾಥ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಜಿ.ರಘುನಂದನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>