ಮೈಸೂರು: ಚಾಮುಂಡಿಬೆಟ್ಟದಲ್ಲಿ ಜುಲೈ 5ರಿಂದ ಆರಂಭವಾಗುವ ಆಷಾಢ ಶುಕ್ರವಾರ ಪ್ರಯುಕ್ತ ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಮಂಗಳವಾರ ಭದ್ರತಾ ಪರಿಶೀಲನೆ ನಡೆಸಿದರು.
ಎಲ್ಲೆಲ್ಲಿ ಬ್ಯಾರಿಕೇಡ್ಗಳನ್ನು ಹಾಕಬೇಕು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಸಬಹುದಾದ ಸ್ಥಳಗಳನ್ನು ಇದೇ ವೇಳೆ ನಿಶ್ವಯಿಸಲಾಯಿತು.
ವಾಹನ ಸಂಚಾರ ನಿರ್ಬಂಧ ಸೇರಿದಂತೆ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನು ಕುರಿತು ಪೊಲೀಸರು ಚರ್ಚೆ ನಡೆಸಿದರು. ಕಳೆದ ಬಾರಿಗಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಲು ಇದೇ ವೇಳೆ ಪೊಲೀಸರು ತೀರ್ಮಾನಿಸಿದರು.
ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಇನ್ಸ್ಪೆಕ್ಟರ್ಗಳಾದ ನಾರಾಯಣಸ್ವಾಮಿ ಹಾಗೂ ಕಿರಣ್ಕುಮಾರ್ ಇದ್ದರು.