‘ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅಪರೂಪದ ವ್ಯಕ್ತಿಗಳು. ಆದರೆ, ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ ಅನ್ನು ಮಹಾರಾಜರು ಸ್ಥಾಪಿಸಿದ್ದೇ ವಿನಃ ವಿಶ್ವೇಶ್ವರಯ್ಯನವರಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಹಾಗಿದ್ದರೆ, ಅವುಗಳಲ್ಲಿ ವಿಶ್ವೇಶ್ವರಯ್ಯನವರ ಪಾತ್ರವಿಲ್ಲವೇ? ಎಲ್ಲವನ್ನೂ ಮಹಾರಾಜರೇ ಮಾಡಿದ್ದರು ಎಂದು ಹೇಳುತ್ತಾ ಹೋದರೆ ಇಂದಿನ ಪೀಳಿಗೆಗೆ ತಪ್ಪು ಮಾಹಿತಿ ರವಾನಿಸಿದಂತೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.