ಘಟನೆಗಳ ವಿವರ: ಶ್ರೀಕಾಂತ ಎಂಬುವವರು ಯುವತಿಯೊಬ್ಬರ ಜತೆ ಚಾಮುಂಡಿಬೆಟ್ಟದಲ್ಲಿ ಅ. 25ರ ಸಂಜೆ ತಮ್ಮ ದ್ವಿಚಕ್ರ ವಾಹನವನ್ನು ‘ವೀವ್ ಪಾಯಿಂಟ್’ ಬಳಿ ನಿಲ್ಲಿಸಿ, ನಂದಿ ವಿಗ್ರಹದ ಕಡೆಗೆ ಬರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದು ಮೂವರು ಕಳ್ಳರು ಮೊದಲು ಜಗಳ ತೆಗೆದಿದ್ದಾರೆ. ನಂತರ, ಚಾಕು ತೋರಿಸಿ ಬೆದರಿಸಿದ್ದಾರೆ. ಶ್ರೀಕಾಂತ್ ಬಳಿ ಹಣ ಇರಲಿಲ್ಲ. ಇದರಿಂದ ಕೋಪಗೊಂಡ ಅವರು ಜತೆಗಿದ್ದ ಯುವತಿಯ ಕುತ್ತಿಗೆಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.