‘ರಾಜೇಶ್ಕುಮಾರ್ ದರಿಯಾ ವರ್ಸಸ್ ರಾಜಸ್ಥಾನ ಲೋಕಸೇವಾ ಆಯೋಗದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಸಮತಳ ಮೀಸಲಾತಿ ಮಾದರಿಯಲ್ಲಿ ಆಯ್ಕೆ ಮಾಡಲಾಗಿದೆ. ಅದರಂತೆ ಪರಿಶಿಷ್ಟರಲ್ಲೇ ಮೊದಲಿಗೆ ಅಂಗವಿಕಲರು, ಹಾಸ್ಟೆಲ್ ವಿದ್ಯಾರ್ಥಿಗಳು, ವಸತಿ ಶಾಲೆಗಳಲ್ಲಿ ಓದಿದವರು, ಮಹಿಳೆಯರು, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಉಳಿದ ಶೇ 38ರಷ್ಟು ಸೀಟುಗಳಿಗೆ ಈ ಯಾವುದೇ ವರ್ಗದಲ್ಲಿ ಬಾರದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ.