<p><strong>ಮೈಸೂರು: ‘</strong>ಮಾದಕ ವ್ಯಸನ ಕ್ಷಣಿಕ ಆನಂದವಷ್ಟೆ ಅಲ್ಲ. ಅದು ಜೀವನ ನಾಶಮಾಡುವ ವಿಷ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.</p><p>ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಇಲ್ಲಿನ ತೊಣಚಿಕೊಪ್ಪಲಿನ ತರಳಬಾಳು ಪಿಯು ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.</p><p>‘ವ್ಯಸನವೆಂದರೆ ಚಟವಷ್ಟೆ ಅಲ್ಲ. ಅದು ವ್ಯಕ್ತಿಯ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಸಮಾಜವನ್ನೇ ನಾಶಮಾಡುವ ಭಯಾನಕ ದಾರಿ’ ಎಂದು ಎಚ್ಚರಿಸಿದರು.</p><p>‘ಮಾದಕ ವ್ಯಸನಗಳಿಗೆ ದಾಸರಾದರೆ ಆಗುವ ಮಾನಸಿಕ ಕುಸಿತ, ದೇಹಾರೋಗ್ಯದ ಹಾನಿ, ವಿದ್ಯಾಭ್ಯಾಸದ ವಿಫಲತೆ, ಕುಟುಂಬದ ನೋವು ಹಾಗೂ ಸಮಾಜದಿಂದ ದೂರಾಗುವ ಸ್ಥಿತಿಯನ್ನು ಅರಿತುಕೊಳ್ಳಬೇಕು. ವ್ಯಸನವು ಮೊದಲು ಸ್ನೇಹದಂತೆ ಬರುತ್ತದೆ. ನಂತರ ಬಂಧನವಾಗಿ ಬಿಗಿದು, ಶವಪೆಟ್ಟಿಗೆಯತ್ತ ಕರೆದೊಯ್ಯುತ್ತದೆ’ ಎಂದು ತಿಳಿಸಿದರು.</p><p>‘ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಉತ್ತಮ ಸ್ನೇಹವಲಯ ಆಯ್ಕೆ ಮಾಡಬೇಕು. ಮೌಲ್ಯಾಧಾರಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಓದಿ, ಅದರಲ್ಲಿನ ಸಂದೇಶದ ದಾರಿ ಹಿಡಿದರೆ ವ್ಯಸನದ ಬಲೆಗೆ ಬೀಳುವುದಿಲ್ಲ’ ಎಂದು ಹೇಳಿದರು.</p><p>ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಪಾಲ್ಗೊಂಡಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಶಿಕುಮಾರ್, ಸೇವಾ ಪ್ರತಿನಿಧಿ ಸ್ವಾತಿ, ಉಪನ್ಯಾಸಕರಾದ ಸಂತೋಷ್ ಮತ್ತು ಆಕಾಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಮಾದಕ ವ್ಯಸನ ಕ್ಷಣಿಕ ಆನಂದವಷ್ಟೆ ಅಲ್ಲ. ಅದು ಜೀವನ ನಾಶಮಾಡುವ ವಿಷ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.</p><p>ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಇಲ್ಲಿನ ತೊಣಚಿಕೊಪ್ಪಲಿನ ತರಳಬಾಳು ಪಿಯು ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.</p><p>‘ವ್ಯಸನವೆಂದರೆ ಚಟವಷ್ಟೆ ಅಲ್ಲ. ಅದು ವ್ಯಕ್ತಿಯ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಸಮಾಜವನ್ನೇ ನಾಶಮಾಡುವ ಭಯಾನಕ ದಾರಿ’ ಎಂದು ಎಚ್ಚರಿಸಿದರು.</p><p>‘ಮಾದಕ ವ್ಯಸನಗಳಿಗೆ ದಾಸರಾದರೆ ಆಗುವ ಮಾನಸಿಕ ಕುಸಿತ, ದೇಹಾರೋಗ್ಯದ ಹಾನಿ, ವಿದ್ಯಾಭ್ಯಾಸದ ವಿಫಲತೆ, ಕುಟುಂಬದ ನೋವು ಹಾಗೂ ಸಮಾಜದಿಂದ ದೂರಾಗುವ ಸ್ಥಿತಿಯನ್ನು ಅರಿತುಕೊಳ್ಳಬೇಕು. ವ್ಯಸನವು ಮೊದಲು ಸ್ನೇಹದಂತೆ ಬರುತ್ತದೆ. ನಂತರ ಬಂಧನವಾಗಿ ಬಿಗಿದು, ಶವಪೆಟ್ಟಿಗೆಯತ್ತ ಕರೆದೊಯ್ಯುತ್ತದೆ’ ಎಂದು ತಿಳಿಸಿದರು.</p><p>‘ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಉತ್ತಮ ಸ್ನೇಹವಲಯ ಆಯ್ಕೆ ಮಾಡಬೇಕು. ಮೌಲ್ಯಾಧಾರಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಓದಿ, ಅದರಲ್ಲಿನ ಸಂದೇಶದ ದಾರಿ ಹಿಡಿದರೆ ವ್ಯಸನದ ಬಲೆಗೆ ಬೀಳುವುದಿಲ್ಲ’ ಎಂದು ಹೇಳಿದರು.</p><p>ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಪಾಲ್ಗೊಂಡಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಶಿಕುಮಾರ್, ಸೇವಾ ಪ್ರತಿನಿಧಿ ಸ್ವಾತಿ, ಉಪನ್ಯಾಸಕರಾದ ಸಂತೋಷ್ ಮತ್ತು ಆಕಾಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>