ಕಾಡನಂಚಿನ ಪ್ರದೇಶದ ರೈತ ತಾವರೆನಾಯಕ ಹಲ್ಲೆ ನಡೆಸಿದವರು. ಅವರು ಹೊಲದಲ್ಲಿ ಕಸಕ್ಕೆ ಬೆಂಕಿ ಹಾಕಿದ್ದರು. ಹೊಗೆಯನ್ನು ಗಮನಿಸಿದ ಅಧಿಕಾರಿ ರವಿಕುಮಾರ್ ಸ್ಥಳಕ್ಕೆ ತೆರಳಿ, ‘ಕಾಡಿಗೆ ಹೊಂದಿಕೊಂಡಂತಿರುವ ಭೂಮಿಯಲ್ಲಿ ಬೆಂಕಿ ಹಾಕುವುದರಿಂದ ಅರಣ್ಯಕ್ಕೆ ಬೆಂಕಿ ತಗಲುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ಈ ವೇಳೆ ರೈತ ಹಾಗೂ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ತಾವರೆನಾಯಕ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರವಿಕುಮಾರ್ ಅವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.