ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನ ಕಲ್ಯಾಣ ಆರ್ಥಿಕ ಸಿದ್ಧಾಂತದ ಮೂಲಕ ಜಗತ್ತಿನಲ್ಲಿ ಪ್ರಸಿದ್ಧರಾಗಿರುವ ಅಮರ್ತ್ಯ ಸೇನ್ ಅವರಿಗೆ ‘ಭಾರತ ರತ್ನ’ ನೀಡಲಾಗಿದೆ. ಅದೇ ಸಿದ್ಧಾಂತವನ್ನು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಜಾರಿ ಮಾಡಿರುವ ಸಿದ್ದರಾಮಯ್ಯ ಅವರೂ ಪದ್ಮ ಪುರಸ್ಕಾರ, ‘ಭಾರತ ರತ್ನ’ಕ್ಕೆ ಅರ್ಹರು. ಈ ಬಗ್ಗೆ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.