ಗಂಗಸ್ಥಾನದಲ್ಲಿ ಗುಜ್ಜಮ್ಮತಾಯಿ ಉತ್ಸವ ಮೂರ್ತಿ, ಕೊಣಪ್ಪಸ್ವಾಮಿ, ಚಿಕ್ಕದೇವಮ್ಮ, ಕೆಂಗಲಮ್ಮ ದೇವರುಗಳು ಸಕಲ ಪೂಜಾ ಕೈಂಕರ್ಯಗಳು ಜರುಗುತ್ತವೆ. ಹರಕೆ ಹೊತ್ತ ಭಕ್ತರು ಬಾಯಿಬೀಗ ಧರಿಸಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಮಧ್ಯಾಹ್ನ ರಥೋತ್ಸವಕ್ಕೆ ಕೆಗ್ಗೆರೆಯಿಂದ ಚಾಲನೆ ದೊರೆತು ಜಯಪುರ ಗುಜ್ಜಮ್ಮತಾಯಿ ದೇವಾಲಯ ತಲುಪುತ್ತದೆ. ಮೆರವಣಿಗೆಯಲ್ಲಿ ಬರಡನಪುರ ಗ್ರಾಮಸ್ಥರು ನಂದಿ ಧ್ವಜ ಕಂಬ ಹೊತ್ತು ಕುಣಿಯುತ್ತಾರೆ.