ಹೊಸಕೋಟೆ ಬಸವರಾಜ್ ಮಾತನಾಡಿ, ‘ಬರಗಾಲದ ನಡುವೆಯೂ ಕೃಷಿ ಸಾಲ ವಸೂಲಿಗಾಗಿ ಬ್ಯಾಂಕ್ಗಳು ರೈತರಿಗೆ ಕಿರುಕುಳ ನೀಡುತ್ತಿವೆ. ನ್ಯಾಯಾಲಯದಲ್ಲಿ ದಾವೆ ಹೂಡುವುದು, ಆನ್ಲೈನ್ ಮೂಲಕ ರೈತರ ಆಸ್ತಿಯನ್ನು ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಕರೂರು ವೈಶ್ಯ ಬ್ಯಾಂಕ್ ಮೂಲಕ ಎಚ್.ಡಿ ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ರೈತರಿಗೆ ಮಧ್ಯವರ್ತಿಗಳ ಮೂಲಕ ₹4 ಲಕ್ಷ ಸಾಲ ಮಂಜೂರು ಮಾಡಿ ಅದರಲ್ಲಿ ₹2 ಲಕ್ಷ ಲಪಟಾಯಿಸಿದ್ದಾರೆ’ ಎಂದು ದೂರಿದರು.