ಈ ದೇಗುಲದಲ್ಲಿರುವ ಸಿದ್ಧೇಶ್ವರಸ್ವಾಮಿ, ಗಣೇಶ, ಮಹಿಷಮರ್ದಿನಿ ಹಾಗೂ ಸೂರ್ಯನ ವಿಗ್ರಹವು ಅತ್ಯಂತ ಮಹತ್ವ ಹೊಂದಿವೆ. ಶಿಥಿಲಗೊಂಡಿದ್ದ ಈ ದೇಗುಲದ ಪುನರ್ಜ್ಜೀವನಕ್ಕಾಗಿ 7 ವರ್ಷಗಳ ಹಿಂದೆಯೇ ಮುಜರಾಯಿ ಇಲಾಖೆಯ ಅನುಮತಿ ಪಡೆದು ಸಮಿತಿ ಸ್ಥಾಪಿಸಲಾಗಿತ್ತು. ಸಂಗ್ರಹಗೊಂಡಿದ್ದ ₹ 80 ಲಕ್ಷ ದೇಣಿಗೆಯನ್ನು ವಿನಿಯೋಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.