<p><strong>ಮೈಸೂರು:</strong> ಇಲ್ಲಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಶನಿವಾರ ಎಂದಿನಂತೆ ನಾಟಕಗಳ ಅಬ್ಬರ ಕೇಳಿ ಬರಲಿಲ್ಲ. ಅಧ್ಯಾತ್ಮದ ಲೇಪವುಳ್ಳ ತತ್ವಪದಗಳು ಒಂದರ ಮೇಲೊಂದರಂತೆ ಕೇಳಿ ಬರತೊಡಗಿದವು. ಇಡೀ ರಂಗಮಂದಿರ ತತ್ವಮಂದಿರದಂತೆ ಒಂದರೆ ಕ್ಷಣ ಭಾಸವಾಯಿತು.</p>.<p>ಸಂತ ಶಿಶುನಾಳ ಷರೀಫ, ಕನಕದಾಸರು,ಕಡಕೊಳ ಮಡಿವಾಳಪ್ಪ ಸೇರಿದಂತೆ ಹಲವು ಹತ್ತು ತತ್ವಪದಕಾರರ ತತ್ಪಪದಗಳನ್ನು ಧಾರವಾಡದಬಸವಲಿಂಗಯ್ಯ ಹಿರೇಮಠ ಮತ್ತು ಅವರ ತಂಡವು ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ತಲೆದೂಗಿದರು.</p>.<p>‘ನಿನ್ನೊಳಗ ನೀನು ಇಳಿದು ನೋಡಣ್ಣ’ ಎಂಬ ತತ್ವಪದವು ಎಂತಹವರನ್ನೂ ಚಿಂತನೆಗೆ ಹಚ್ಚಿತು. ‘ಗುಬ್ಬಿಯೊಂದು ಗೂಡು ಕಟ್ಯಾದೋ, ಆ ಗುಡಿನೊಳಗ ಜೀವ ಇಟ್ಟು ಎಲ್ಲಿ ಹೋಗಿದೆಯೋ’, ‘ಇಂದು ನೋಡಿರಿ ಲೋಕದ ಕಣ್ಣ... ಮಳ್ಳ ಜನರಿಗೆ ತಿಳಿಯದಲ್ಲಣ್ಣ’,‘ಸತ್ಯವಂತರ ಸಂಘವಿರಲು ತೀರ್ಥವೇತಕೆ’ ಎಂಬ ತತ್ವಪದ ಸೇರಿದಂತೆ ಹಲವು ಬಗೆಯ ತತ್ಪಪದಗಳು ಪ್ರೇಕ್ಷಕರ ಮನಗೆದ್ದವು.</p>.<p>ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ‘ಮೈಸೂರು ರಂಗಾಯಣ ನಾಟಕಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಇನ್ನಿತರೆ ಕಲೆಗಳಿಗೂ ಅವಕಾಶ ನೀಡುತ್ತಿದೆ’ ಎಂದು ಶ್ಲಾಘಿಸಿದರು.</p>.<p>ತತ್ವಪದ ಗಾಯಕ ಏಕತಾರಿ ರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಏಕತಾರಿ ರಾಮಯ್ಯ ಹಾಗೂ ಬಸವಲಿಂಗಯ್ಯ ಹಿರೇಮಠ ಅವರ ಕಾರ್ಯವನ್ನು ಶ್ಲಾಘಿಸಿದರು. ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಶನಿವಾರ ಎಂದಿನಂತೆ ನಾಟಕಗಳ ಅಬ್ಬರ ಕೇಳಿ ಬರಲಿಲ್ಲ. ಅಧ್ಯಾತ್ಮದ ಲೇಪವುಳ್ಳ ತತ್ವಪದಗಳು ಒಂದರ ಮೇಲೊಂದರಂತೆ ಕೇಳಿ ಬರತೊಡಗಿದವು. ಇಡೀ ರಂಗಮಂದಿರ ತತ್ವಮಂದಿರದಂತೆ ಒಂದರೆ ಕ್ಷಣ ಭಾಸವಾಯಿತು.</p>.<p>ಸಂತ ಶಿಶುನಾಳ ಷರೀಫ, ಕನಕದಾಸರು,ಕಡಕೊಳ ಮಡಿವಾಳಪ್ಪ ಸೇರಿದಂತೆ ಹಲವು ಹತ್ತು ತತ್ವಪದಕಾರರ ತತ್ಪಪದಗಳನ್ನು ಧಾರವಾಡದಬಸವಲಿಂಗಯ್ಯ ಹಿರೇಮಠ ಮತ್ತು ಅವರ ತಂಡವು ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ತಲೆದೂಗಿದರು.</p>.<p>‘ನಿನ್ನೊಳಗ ನೀನು ಇಳಿದು ನೋಡಣ್ಣ’ ಎಂಬ ತತ್ವಪದವು ಎಂತಹವರನ್ನೂ ಚಿಂತನೆಗೆ ಹಚ್ಚಿತು. ‘ಗುಬ್ಬಿಯೊಂದು ಗೂಡು ಕಟ್ಯಾದೋ, ಆ ಗುಡಿನೊಳಗ ಜೀವ ಇಟ್ಟು ಎಲ್ಲಿ ಹೋಗಿದೆಯೋ’, ‘ಇಂದು ನೋಡಿರಿ ಲೋಕದ ಕಣ್ಣ... ಮಳ್ಳ ಜನರಿಗೆ ತಿಳಿಯದಲ್ಲಣ್ಣ’,‘ಸತ್ಯವಂತರ ಸಂಘವಿರಲು ತೀರ್ಥವೇತಕೆ’ ಎಂಬ ತತ್ವಪದ ಸೇರಿದಂತೆ ಹಲವು ಬಗೆಯ ತತ್ಪಪದಗಳು ಪ್ರೇಕ್ಷಕರ ಮನಗೆದ್ದವು.</p>.<p>ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ‘ಮೈಸೂರು ರಂಗಾಯಣ ನಾಟಕಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಇನ್ನಿತರೆ ಕಲೆಗಳಿಗೂ ಅವಕಾಶ ನೀಡುತ್ತಿದೆ’ ಎಂದು ಶ್ಲಾಘಿಸಿದರು.</p>.<p>ತತ್ವಪದ ಗಾಯಕ ಏಕತಾರಿ ರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಏಕತಾರಿ ರಾಮಯ್ಯ ಹಾಗೂ ಬಸವಲಿಂಗಯ್ಯ ಹಿರೇಮಠ ಅವರ ಕಾರ್ಯವನ್ನು ಶ್ಲಾಘಿಸಿದರು. ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>