<p><strong>ಮೈಸೂರು:</strong> ‘ಪ್ರತಿ ಮನೆಯಲ್ಲೂ ಭಾರತದ ಸಂವಿಧಾನದ ಪ್ರತಿ ಇರಬೇಕು’ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಹೇಳಿದರು.</p><p>ಕಾಲೇಜಿನ ಆವರಣದಲ್ಲಿ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸಂವಿಧಾನದಂತಹ ಶ್ರೇಷ್ಠ ಗ್ರಂಥವನ್ನು ಇಟ್ಟುಕೊಳ್ಳುವುದು ಮಾನವ ಶ್ರೇಷ್ಠತೆಯ ಸಂಕೇತ’ ಎಂದರು.</p><p>‘ಸಂವಿಧಾನವು ಪ್ರತಿ ಪ್ರಜೆಯನ್ನೂ ಜಾತ್ಯತೀತ ಮತ್ತು ಸಮಾನವಾಗಿ ಕಾಣುತ್ತದೆ. ಭಾರತೀಯ ಎಂಬ ಸ್ಥಾನ ನೀಡಿ ಮಾನ್ಯ ಮಾಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಬಾಳಬೇಕು. ಆಗ, ಸಹಿಷ್ಣುತೆ, ಸಮಾನತೆ, ಸಹಬಾಳ್ವೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.</p><p>ಮುಖ್ಯಅತಿಥಿಗಳಾಗಿದ್ದ ಶ್ರೀಪಾದ್ ಎಚ್.ಆರ್. ಮತ್ತು ರೆಹಮತ್ ಉಲ್ಲಾ ಜಿ., ಅಧ್ಯಾಪಕ ಸಂಘದ ಕಾರ್ಯದರ್ಶಿ ರಮೇಶ ಕೆ.ಎಲ್. ಮಾತನಾಡಿದರು.</p><p>ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಖಜಾಂಚಿ ಬೃಂದಾ ಎನ್., ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಬೃಂದಾ ಪಾಲ್ಗೊಂಡಿದ್ದರು.</p>.<p><strong>ಹಾಸ್ಟೆಲ್ನಲ್ಲೂ ಆಚರಣೆ:</strong> ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಧ್ವಜಾರೋಹಣ ನೆರವೇರಿಸಿದರು.</p><p>ನಿಲಯಪಾಲಕಿ ಪದ್ಮಾ ಸಿ., ವಿದ್ಯಾರ್ಥಿನಿಲಯ ಸಮಿತಿ ಸದಸ್ಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಪ್ರತಿ ಮನೆಯಲ್ಲೂ ಭಾರತದ ಸಂವಿಧಾನದ ಪ್ರತಿ ಇರಬೇಕು’ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಹೇಳಿದರು.</p><p>ಕಾಲೇಜಿನ ಆವರಣದಲ್ಲಿ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸಂವಿಧಾನದಂತಹ ಶ್ರೇಷ್ಠ ಗ್ರಂಥವನ್ನು ಇಟ್ಟುಕೊಳ್ಳುವುದು ಮಾನವ ಶ್ರೇಷ್ಠತೆಯ ಸಂಕೇತ’ ಎಂದರು.</p><p>‘ಸಂವಿಧಾನವು ಪ್ರತಿ ಪ್ರಜೆಯನ್ನೂ ಜಾತ್ಯತೀತ ಮತ್ತು ಸಮಾನವಾಗಿ ಕಾಣುತ್ತದೆ. ಭಾರತೀಯ ಎಂಬ ಸ್ಥಾನ ನೀಡಿ ಮಾನ್ಯ ಮಾಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಬಾಳಬೇಕು. ಆಗ, ಸಹಿಷ್ಣುತೆ, ಸಮಾನತೆ, ಸಹಬಾಳ್ವೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.</p><p>ಮುಖ್ಯಅತಿಥಿಗಳಾಗಿದ್ದ ಶ್ರೀಪಾದ್ ಎಚ್.ಆರ್. ಮತ್ತು ರೆಹಮತ್ ಉಲ್ಲಾ ಜಿ., ಅಧ್ಯಾಪಕ ಸಂಘದ ಕಾರ್ಯದರ್ಶಿ ರಮೇಶ ಕೆ.ಎಲ್. ಮಾತನಾಡಿದರು.</p><p>ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಖಜಾಂಚಿ ಬೃಂದಾ ಎನ್., ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಬೃಂದಾ ಪಾಲ್ಗೊಂಡಿದ್ದರು.</p>.<p><strong>ಹಾಸ್ಟೆಲ್ನಲ್ಲೂ ಆಚರಣೆ:</strong> ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ. ಧ್ವಜಾರೋಹಣ ನೆರವೇರಿಸಿದರು.</p><p>ನಿಲಯಪಾಲಕಿ ಪದ್ಮಾ ಸಿ., ವಿದ್ಯಾರ್ಥಿನಿಲಯ ಸಮಿತಿ ಸದಸ್ಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>