‘ಮಾತೃ ಭಾಷೆಗೆ ಆದ್ಯತೆ ನೀಡದಿದ್ದರೆ, ಪ್ರತ್ಯೇಕತಾವಾದ ಮುನ್ನೆಲೆಗೆ ಬರುತ್ತದೆ ಎಂಬುದಕ್ಕೆ ಬಾಂಗ್ಲಾದೇಶದ ವಿಮೋಚನೆ ಉದಾಹರಣೆಯಾಗಿದೆ. ಸಾಂಸ್ಕೃತಿಕ ಭಾಷೆಯನ್ನು ಹಾಗೂ ಅದರ ಬಹುತ್ವವನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಬುಡಕಟ್ಟು ಜನರ ಭಾಷೆಗಳು ನಶಿಸುವ ಅಪಾಯದಲ್ಲಿವೆ, ಅವರಿಗೆ ತಮ್ಮ ಮಾತೃ ಭಾಷೆಯ ಶಿಕ್ಷಣ ನೀಡಿದಾಗ ಭಾಷೆ ಬೆಳೆಯುತ್ತದೆ’ ಎಂದರು.