ಪ್ರತಿ ವರ್ಷ ಉರಿ ಗದ್ದಿಗೆಗೆ ಬಂದು ಪೂಜೆ ಸಲ್ಲಿಸಿ ಹೋಗುವುದರಿಂದ ಒಳ್ಳೆಯದಾಗುತ್ತದೆ. ಇದರಿಂದ ಬೆಟ್ಟದಷ್ಟು ಕಷ್ಟಗಳು ಬಂದರೂ ಮಂಜು ಗಡ್ಡೆ ಕರಗಿ ನೀರಾದಂತೆ ಕರಗಿ ಹೋಗುತ್ತವೆ. ಮನೆ ದೇವರು ಆಗಿರುವುದರಿಂದ ಕಳೆದ 30 ವರ್ಷಗಳಿಂದ ಕಪ್ಪಡಿ ಕ್ಷೇತ್ರಕ್ಕೆ ಬರುತ್ತಿದ್ದೇನೆ ಭಾನುವಾರ ಸಂಜೆ ಮಗನೊಂದಿಗೆ ಬಂದು ಮುಡಿ ಕೊಟ್ಟು ಪೂಜೆ ಸಲ್ಲಿಸಿದ್ದೇನೆ.
-ಮಹದೇವ ಹರಳೆ
ಕೊಳ್ಳೆಗಾಲ ತಾಲ್ಲೂಕು ಈ ಬಾರಿ ಕಡಿಮೆ ಭಕ್ತಾದಿಗಳ ಸಂಖ್ಯೆಯಲ್ಲಿ ಹಿಂದಿಗಿಂತ ಈ ಬಾರಿ ಕಡಿಮೆಯಾಗಿದೆ. ಜಾತ್ರೋತ್ಸವದ ಸಂದರ್ಭ ಕೊನೆಯ 2-3ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಅದರಂತೆ ಸೋಮವಾರ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
-ಕೃಷ್ಣೇಗೌಡ ವ್ಯಾಪಾರಿ ಬಾಲೂರು
ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಸೋಮವಾರ ಪಂಕ್ತಿ ಭೋಜನ ನಡೆಯಿತು