ಗ್ರಹೇಶ್ವರ ವಿದ್ಯಾರಣ್ಯಂ ಅವರ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ‘ಶ್ರೀಗರಿ’ ಚಿತ್ರದ ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಚಲನಚಿತ್ರದ ಮೂಲ ಆಶಯವೇ ಸಮಾಜವನ್ನು ತಿದ್ದುವುದು. ಆದರೆ, ಸಿನಿಮಾಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗುತ್ತಿವೆ. ಹಾಗಾಗಿ ಹೊಸ ಪ್ರತಿಭೆಗಳು ಕ್ಷೇತ್ರ ಪ್ರವೇಶ ಮಾಡುವಾಗಲೇ ಬದ್ಧತೆಯ ಸಂಕಲ್ಪ ಮಾಡಬೇಕು. ಜನಪರ, ಸಮಾಜಪರ ಧೋರಣೆಗಳನ್ನು ಹೊಂದಿ, ಅವನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.