ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ದೂರವಿಟ್ಟಿದ್ದು ಕೆಟ್ಟ ಸಂಪ್ರದಾಯ: ಬಡಗಲಪುರ ನಾಗೇಂದ್ರ

Published 25 ಮೇ 2023, 7:28 IST
Last Updated 25 ಮೇ 2023, 7:28 IST
ಅಕ್ಷರ ಗಾತ್ರ

ಮೈಸೂರು: ‘ನೂತನ ಸಂಸತ್‌ ಭವನದ ಉದ್ಘಾಟನೆಯಿಂದ ರಾಷ್ಟ್ರಪತಿಯನ್ನು ದೂರ ಇಟ್ಟಿರುವುದು ಕೆಟ್ಟ ಸಂಪ್ರದಾಯ ವಾಗಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದ್ದಾರೆ.

ಈ ಬಗ್ಗೆ ಬುಧವಾರ ಪ್ರಕಟಣೆ ನೀಡಿರುವ ಅವರು, ‘ನೂತನ ಸಂಸತ್‌ ಭವನವನ್ನು ದೇಶದ
ಪ್ರಥಮ ಪ್ರಜೆಯಿಂದ ಉದ್ಘಾಟನೆ ಮಾಡಿಸಿದ್ದರೆ ಶ್ರೇಷ್ಠತೆಯಾಗುತ್ತಿತ್ತು. ಅವರನ್ನು ದೂರವಿಟ್ಟು ನಡೆಸುತ್ತಿರುವುದು ರಾಜನೀತಿ ತತ್ವವೂ ಅಲ್ಲ, ಒಳ್ಳೆಯ ಸಂಪ್ರದಾಯ ಅಲ್ಲವೇ ಅಲ್ಲ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಯನ್ನು ಸಂಘವು ಖಂಡಿಸುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT