<p>ಮೈಸೂರು: ‘ಯಾವುದೇ ಧರ್ಮವೂ ಯುದ್ಧ ಮತ್ತು ದ್ವೇಷವನ್ನು ಸಾರುವುದಿಲ್ಲ–ಬೋಧಿಸುವುದಿಲ್ಲ’ ಎಂದು ಹುಡಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ.ಅನೀಸ್ ಅಹಮದ್ ಹೇಳಿದರು.</p>.<p>ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾನವಿಕ ವಿಭಾಗಗಳ ಸಹಯೋಗದಲ್ಲಿ ಕಾಲೇಜಿನ 70ನೇ ವರ್ಷಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಅಂತರ್ಧರ್ಮೀಯ ಸಂವಾದ’ ಹಾಗೂ ‘ಶಾಂತಿ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮೊಳಗಿನ ಹಾಗೂ ನಮ್ಮ ಸುತ್ತಮುತ್ತಲಿನ ಶಾಂತಿ ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ. ಮುಸ್ಲಿಮರು ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಭಾರತವು ಒಂದಾಗಿದೆ’ ಎಂದರು.</p>.<p>ಧರ್ಮಗುರು ರೆ.ಜಾನ್ ಪೀಟರ್ ಮಾತನಾಡಿ, ‘ದೇವರು ಎಂದಿಗೂ ಶಾಂತಿಯ ಲೇಖಕ. ಇದು ಮಾನವನ ಬುದ್ಧಿವಂತಿಕೆಯ ಉಪ ಉತ್ಪನ್ನವಲ್ಲ’ ಎಂದು ನುಡಿದರು.</p>.<p>ಮುಖ್ಯ ಅತಿಥಿಯಾಗಿದ್ದ ವಿದ್ವಾಂಸ ಡಾ.ಬಿ.ಎನ್.ಬಾಲಾಜಿ, ‘ಎಲ್ಲ ಧರ್ಮಗಳು ಸೇರಿಯೇ ನಮ್ಮನ್ನು ಒಂದು ದೇಶವನ್ನಾಗಿ ಮಾಡಿವೆ. ಭಾರತದಲ್ಲಿ ಅಧ್ಯಾತ್ಮ ಮತ್ತು ಧರ್ಮಗಳು ಸಮ್ಮಿಲನಗೊಳ್ಳುತ್ತವೆ. ನಾವೆಲ್ಲರೂ ಭಾರತೀಯರು ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಒಗ್ಗೂಡಿ ಸಾರಬೇಕಾಗಿದೆ’ ಎಂದರು.</p>.<p>‘ಪ್ರತಿಯೊಬ್ಬರಿಗೂ ಪ್ರತಿ ದಿನ ಶಾಂತಿಗಾಗಿ ಪ್ರಾರ್ಥಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ’ ಎಂದು ಆಶಿಸಿದರು.</p>.<p>ಕೆಎಸ್ಒಯು ಕನ್ನಡ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ‘ವೇದಗಳಲ್ಲಿನ ವಿವಿಧ ಶ್ಲೋಕಗಳು ಪ್ರಪಂಚದಾದ್ಯಂತ ಶಾಂತಿಯನ್ನು ಎತ್ತಿ ಹಿಡಿಯುವ ಪ್ರಾಮುಖ್ಯತೆಯನ್ನು ಸಾರಿ ಹೇಳಿವೆ’ ಎಂದು ತಿಳಿಸಿದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ.ರವಿ ಜೆ.ಡಿ. ಸಾಲ್ಡಾನಾ ಮಾತನಾಡಿದರು.</p>.<p>‘ಶಾಂತಿ ಉತ್ಸವ’ದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಶಾಂತಿಯನ್ನು ಸಾಧಿಸಬಹುದು’ ಎಂಬ ಆಶಯ ಕಾರ್ಯಕ್ರಮ ನಡೆಯಿತು.</p>.<p>ರೆ.ಫಾ.ಪ್ಯಾಟ್ರಿಕ್ ಕ್ಸೇವಿಯರ್, ರೆ.ಫಾ.ಬರ್ನಾಡ್ ಪ್ರಕಾಶ್, ಉಪ ಪ್ರಾಂಶುಪಾಲ ಸಂಜಯ್, ಮುಖ್ಯ ಸಂಯೋಜಕ ಜೆ.ಜಾರ್ಜ್, ಸಂಚಾಲಕಿ ಪಂಚಮಾ ಎಸ್.ಎನ್. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಯಾವುದೇ ಧರ್ಮವೂ ಯುದ್ಧ ಮತ್ತು ದ್ವೇಷವನ್ನು ಸಾರುವುದಿಲ್ಲ–ಬೋಧಿಸುವುದಿಲ್ಲ’ ಎಂದು ಹುಡಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ.ಅನೀಸ್ ಅಹಮದ್ ಹೇಳಿದರು.</p>.<p>ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾನವಿಕ ವಿಭಾಗಗಳ ಸಹಯೋಗದಲ್ಲಿ ಕಾಲೇಜಿನ 70ನೇ ವರ್ಷಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಅಂತರ್ಧರ್ಮೀಯ ಸಂವಾದ’ ಹಾಗೂ ‘ಶಾಂತಿ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮೊಳಗಿನ ಹಾಗೂ ನಮ್ಮ ಸುತ್ತಮುತ್ತಲಿನ ಶಾಂತಿ ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ. ಮುಸ್ಲಿಮರು ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಭಾರತವು ಒಂದಾಗಿದೆ’ ಎಂದರು.</p>.<p>ಧರ್ಮಗುರು ರೆ.ಜಾನ್ ಪೀಟರ್ ಮಾತನಾಡಿ, ‘ದೇವರು ಎಂದಿಗೂ ಶಾಂತಿಯ ಲೇಖಕ. ಇದು ಮಾನವನ ಬುದ್ಧಿವಂತಿಕೆಯ ಉಪ ಉತ್ಪನ್ನವಲ್ಲ’ ಎಂದು ನುಡಿದರು.</p>.<p>ಮುಖ್ಯ ಅತಿಥಿಯಾಗಿದ್ದ ವಿದ್ವಾಂಸ ಡಾ.ಬಿ.ಎನ್.ಬಾಲಾಜಿ, ‘ಎಲ್ಲ ಧರ್ಮಗಳು ಸೇರಿಯೇ ನಮ್ಮನ್ನು ಒಂದು ದೇಶವನ್ನಾಗಿ ಮಾಡಿವೆ. ಭಾರತದಲ್ಲಿ ಅಧ್ಯಾತ್ಮ ಮತ್ತು ಧರ್ಮಗಳು ಸಮ್ಮಿಲನಗೊಳ್ಳುತ್ತವೆ. ನಾವೆಲ್ಲರೂ ಭಾರತೀಯರು ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಒಗ್ಗೂಡಿ ಸಾರಬೇಕಾಗಿದೆ’ ಎಂದರು.</p>.<p>‘ಪ್ರತಿಯೊಬ್ಬರಿಗೂ ಪ್ರತಿ ದಿನ ಶಾಂತಿಗಾಗಿ ಪ್ರಾರ್ಥಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ’ ಎಂದು ಆಶಿಸಿದರು.</p>.<p>ಕೆಎಸ್ಒಯು ಕನ್ನಡ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ‘ವೇದಗಳಲ್ಲಿನ ವಿವಿಧ ಶ್ಲೋಕಗಳು ಪ್ರಪಂಚದಾದ್ಯಂತ ಶಾಂತಿಯನ್ನು ಎತ್ತಿ ಹಿಡಿಯುವ ಪ್ರಾಮುಖ್ಯತೆಯನ್ನು ಸಾರಿ ಹೇಳಿವೆ’ ಎಂದು ತಿಳಿಸಿದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ.ರವಿ ಜೆ.ಡಿ. ಸಾಲ್ಡಾನಾ ಮಾತನಾಡಿದರು.</p>.<p>‘ಶಾಂತಿ ಉತ್ಸವ’ದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಶಾಂತಿಯನ್ನು ಸಾಧಿಸಬಹುದು’ ಎಂಬ ಆಶಯ ಕಾರ್ಯಕ್ರಮ ನಡೆಯಿತು.</p>.<p>ರೆ.ಫಾ.ಪ್ಯಾಟ್ರಿಕ್ ಕ್ಸೇವಿಯರ್, ರೆ.ಫಾ.ಬರ್ನಾಡ್ ಪ್ರಕಾಶ್, ಉಪ ಪ್ರಾಂಶುಪಾಲ ಸಂಜಯ್, ಮುಖ್ಯ ಸಂಯೋಜಕ ಜೆ.ಜಾರ್ಜ್, ಸಂಚಾಲಕಿ ಪಂಚಮಾ ಎಸ್.ಎನ್. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>