ಮೈಸೂರು: ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ತಡೆಯಲು ಪಾಲಿಕೆಯು ಬುಧವಾರದಿಂದ ಜಾರಿಗೆ ಬಂದಿದ್ದ ಮಾರುಕಟ್ಟೆಗಳ ವಿಕೇಂದ್ರೀಕರಣ ವ್ಯವಸ್ಥೆಗೆ ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ 110 ಮಂದಿ ವ್ಯಾಪಾರಿಗಳು ಭಾಗವಹಿಸುವ ಮೂಲಕ ಹಾಗೂ ಹೆಚ್ಚಿನ ಖರೀದಿದಾರರು ಬರುವ ಮೂಲಕ ಈ ಹೊಸ ಮಾರುಕಟ್ಟೆ ಯಶಸ್ವಿಯಾಯಿತು.
ಬನ್ನಿಮಂಟಪದಲ್ಲಿ 30 ಮಂದಿ ಹಾಗೂ ವಿಜಯನಗರದ 2ನೇ ಹಂತದಲ್ಲಿ ಕೇವಲ ಒಬ್ಬರು ವ್ಯಾಪಾರಿ ಮಾತ್ರ ಇದ್ದರು. ಇನ್ನುಳಿದಂತೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವಣರದಲ್ಲಿ 120 ಮಂದಿ ವ್ಯಾಪಾರಸ್ಥರು ಭಾಗಿಯಾದರು.