<p><strong>ಮೈಸೂರು</strong>: ರಾಜ್ಯದಲ್ಲಿರುವ ಮಾದಕವಸ್ತು ಜಾಲವನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಎಲ್ಲೆಡೆ ಚಿತ್ರರಂಗದಲ್ಲಿ ಮಾತ್ರವೇ ಈ ಜಾಲ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಚಿತ್ರರಂಗಕ್ಕಿಂತ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ಈ ಜಾಲದ ಅಸ್ತಿತ್ವ ಇದೆ ಎಂದು ಅವರು ಆರೋಪಿಸಿದರು.</p>.<p>‘ಮಾದಕವಸ್ತು ಜಾಲ ಒಂದು ಭಯೋತ್ಪಾದನೆ ಇದ್ದಂತೆ. ಇದು ನಮ್ಮ ರಾಷ್ಟ್ರ ವಿರೋಧಿ. ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿ, ಅವರನ್ನು, ಅವರ ಕುಟುಂಬಗಳನ್ನು ನಾಶ ಮಾಡುತ್ತದೆ. ಇದು ಬಾಂಬ್ ಹಾಕುವುದಕ್ಕೆ ಸಮ’ ಎಂದು ಅವರು ಖಂಡಿಸಿದರು.</p>.<p>ಮಾದಕವಸ್ತುಗಳಿಂದ ಉಂಟಾಗುವ ಹಾನಿಯ ಕುರಿತು ಯುವಜನರಲ್ಲಿ ಸರ್ಕಾರ ಅರಿವು ಮೂಡಿಸಬೇಕು. ಪೋಷಕರೂ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಈ ಮೂಲಕ ಅವರು ಈ ಜಾಲಕ್ಕೆ ಸಿಲುಕದ ಹಾಗೆ ಮಾಡಬಹುದು ಎಂದು ಸಲಹೆ ನೀಡಿದರು.</p>.<p>ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯಬಾರದು. ಎಂತಹ ಪ್ರಭಾವಿಗಳ ಹಸ್ತಕ್ಷೇಪ ಇದ್ದರೂ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ಬುಡಸಮೇತ ಇದನ್ನು ಕಿತ್ತು ಬೀಸಾಡಬೇಕು ಎಂದು ಅವರು ಒತ್ತಾಯಿಸಿದರು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜಸ್ ಲೋಕೇಶ್ಗೌಡ, ಮುಖಂಡರಾದ ಪಿ.ಶಾಂತರಾಜೇಅರಸ್, ಎಂ.ಬಿ.ಪ್ರಭುಶಂಕರ್, ಪಿ.ಪ್ರಜೀಶ್, ಸುಬ್ಬೇಗೌಡ, ಮೊಗಣ್ಣಾಚಾರ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ರಾಜ್ಯದಲ್ಲಿರುವ ಮಾದಕವಸ್ತು ಜಾಲವನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>ಎಲ್ಲೆಡೆ ಚಿತ್ರರಂಗದಲ್ಲಿ ಮಾತ್ರವೇ ಈ ಜಾಲ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಚಿತ್ರರಂಗಕ್ಕಿಂತ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ಈ ಜಾಲದ ಅಸ್ತಿತ್ವ ಇದೆ ಎಂದು ಅವರು ಆರೋಪಿಸಿದರು.</p>.<p>‘ಮಾದಕವಸ್ತು ಜಾಲ ಒಂದು ಭಯೋತ್ಪಾದನೆ ಇದ್ದಂತೆ. ಇದು ನಮ್ಮ ರಾಷ್ಟ್ರ ವಿರೋಧಿ. ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿ, ಅವರನ್ನು, ಅವರ ಕುಟುಂಬಗಳನ್ನು ನಾಶ ಮಾಡುತ್ತದೆ. ಇದು ಬಾಂಬ್ ಹಾಕುವುದಕ್ಕೆ ಸಮ’ ಎಂದು ಅವರು ಖಂಡಿಸಿದರು.</p>.<p>ಮಾದಕವಸ್ತುಗಳಿಂದ ಉಂಟಾಗುವ ಹಾನಿಯ ಕುರಿತು ಯುವಜನರಲ್ಲಿ ಸರ್ಕಾರ ಅರಿವು ಮೂಡಿಸಬೇಕು. ಪೋಷಕರೂ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಈ ಮೂಲಕ ಅವರು ಈ ಜಾಲಕ್ಕೆ ಸಿಲುಕದ ಹಾಗೆ ಮಾಡಬಹುದು ಎಂದು ಸಲಹೆ ನೀಡಿದರು.</p>.<p>ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯಬಾರದು. ಎಂತಹ ಪ್ರಭಾವಿಗಳ ಹಸ್ತಕ್ಷೇಪ ಇದ್ದರೂ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ಬುಡಸಮೇತ ಇದನ್ನು ಕಿತ್ತು ಬೀಸಾಡಬೇಕು ಎಂದು ಅವರು ಒತ್ತಾಯಿಸಿದರು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜಸ್ ಲೋಕೇಶ್ಗೌಡ, ಮುಖಂಡರಾದ ಪಿ.ಶಾಂತರಾಜೇಅರಸ್, ಎಂ.ಬಿ.ಪ್ರಭುಶಂಕರ್, ಪಿ.ಪ್ರಜೀಶ್, ಸುಬ್ಬೇಗೌಡ, ಮೊಗಣ್ಣಾಚಾರ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>