ಮೈಸೂರು: ‘ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ (ಡಿ.26) ನಡೆಯಲಿದ್ದು, ಕೆಲವು ಬಲಾಢ್ಯ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಬಿಡುಗಡೆ ಮಾಡಿ ಅವುಗಳನ್ನು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗಗಳು) ಕೋಟಾದಲ್ಲಿ ಸೇರಿಸಲು ಸರ್ಕಾರ ಯೋಜಿಸಿರುವ ಸುದ್ದಿ ಬಲವಾಗಿ ಹಬ್ಬಿದೆ’ ಎಂದು ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ತಿಳಿಸಿದರು.