‘ಅಭಿಮಾನಿಗಳ ಆಸೆ ಈಡೇರಿಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ಸರ್ಕಾರವು ಈಗಾಗಲೇ ಸ್ಮಾರಕ ನಿರ್ಮಾಣ ಮಾಡಿರುವುದರಿಂದ ಮತ್ತೊಂದು ಸ್ಮಾರಕಕ್ಕೆ ಹಣ ವಿನಿಯೋಗಿಸಲಾಗುವುದಿಲ್ಲ. ಹೀಗಾಗಿ, ದುಡ್ಡಿನ ಅಪೇಕ್ಷೆ ಇಲ್ಲದೇ ಕಲಾ ದಿಗ್ಗಜನಿಗೆ ಗೌರವಾರ್ಥವಾಗಿ ಜಾಗ ಬಿಟ್ಟು ಕೊಡುವಂತೆ ಬಾಲಣ್ಣ ಕುಟುಂಬದವರನ್ನು ವೈಯಕ್ತಿಕವಾಗಿ ಕೋರಿರುವೆ’ ಎಂದು ಹೇಳಿದರು.