<p><strong>ಮೈಸೂರು: </strong>ಸೊಂಟದ ಮೂಳೆ ಮುರಿದ ಕಾರಣದಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕಿ ಎಸ್.ಜಾನಕಿ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಕೃತಕ ಕೀಲು ಜೋಡಿದ್ದಾರೆ.</p>.<p>ಇಲ್ಲಿನ ಸ್ನೇಹಿತರ ಮನೆಗೆ ಒಂದು ವಾರದ ಹಿಂದೆ ಜಾನಕಿ ಅವರು ಬಂದಿದ್ದಾಗ ಮನೆಯ ಹೊಸ್ತಿಲು ಮುಗ್ಗರಿಸಿ ಬಿದ್ದಿದ್ದರು. ಇದರಿಂದ ಅವರ ಸೊಂಟದ ಮೂಳೆ ಮುರಿದಿತ್ತು. ಕೂಡಲೇ ಅವರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.</p>.<p>ಕೀಲುಮೂಳೆ ತಜ್ಞ ಡಾ.ನಿತಿನ್ ಅವರು ಶಸ್ತ್ರಚಿಕಿತ್ಸೆ ನಡೆಸಿ, ಕೃತಕ ಕೀಲನ್ನು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾಗಿ ಏಳು ದಿನಗಳಾಗಿದ್ದು, ಮೂರು ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.</p>.<p>ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಜಾನಕಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡ ಮಕ್ಕಳ ಪ್ರೀತಿಯಿಂದ ನಾನು ಆರೋಗ್ಯವಂತಳಾಗಿದ್ದೇನೆ. ಅಭಿಮಾನಿಗಳಿಗಾಗಿ ನಾನು ಚನ್ನಾಗಿರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ಹೊಸ್ತಿಲು ಮುಗ್ಗರಿಸಿ ಬಿದ್ದಾಗ ತುಂಬಾ ನೋವಾಯಿತು. ವೈದ್ಯರು ನನ್ನ ಕೀಲು ತೆಗೆದು, ಕೃತಕ ಕೀಲು ಜೋಡಿಸಿದ್ದಾರೆ. ನನಗಿದು ಹೊಸ ಅನುಭವ’ ಎಂದು ಜಾನಕಿ ತಾವೇ ಉತ್ಸಾಹದಿಂದಲೇ ವಿವರ ನೀಡಿದರು.</p>.<p class="Briefhead"><strong>ಕಿಡಿ ಕಾರಿದ ಪುತ್ರ ಮುರಳಿ ಕೃಷ್ಣ</strong></p>.<p>‘ಒಂದು ವಾರದಿಂದ ವಿಚಾರ ಗೌಪ್ಯವಾಗಿಟ್ಟಿದ್ದೆವು. ಈ ಸುದ್ದಿ ಮಾಧ್ಯಮದವರಿಗೆ ಸಿಕ್ಕಿದ್ದು ಹೇಗೆ?’ ಎಂದು ಎನ್.ಜಾನಕಿ ಪುತ್ರ, ಸಂಗೀತ ನಿರ್ದೇಶಕ ಮುರಳಿ ಕೃಷ್ಣ ಕಿರಿಕಾರಿದರು.</p>.<p>ಸುದ್ದಿ ಕೊಟ್ಟಿದ್ದು ಯಾರೆಂದು ತಿಳಿಸುವಂತೆ ಮುರಳಿ ಒತ್ತಾಯಿಸಿದರು. ಮಾಧ್ಯಮದವರು ಇದಕ್ಕೆ ನಿರಾಕರಿಸಿದರು. ‘ಹೀಗೆ ಹೇಳಿದರೆ ಹೇಗೆ. ನಾನು ನನ್ನ ತಾಯಿಯನ್ನು ಮಾತನಾಡಿಸಲು ನಿಮಗೆ ಅವಕಾಶ ಕೊಡದೇ ಇರಬಹುದು ಅಲ್ಲವೇ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಸೊಂಟದ ಮೂಳೆ ಮುರಿದ ಕಾರಣದಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕಿ ಎಸ್.ಜಾನಕಿ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಕೃತಕ ಕೀಲು ಜೋಡಿದ್ದಾರೆ.</p>.<p>ಇಲ್ಲಿನ ಸ್ನೇಹಿತರ ಮನೆಗೆ ಒಂದು ವಾರದ ಹಿಂದೆ ಜಾನಕಿ ಅವರು ಬಂದಿದ್ದಾಗ ಮನೆಯ ಹೊಸ್ತಿಲು ಮುಗ್ಗರಿಸಿ ಬಿದ್ದಿದ್ದರು. ಇದರಿಂದ ಅವರ ಸೊಂಟದ ಮೂಳೆ ಮುರಿದಿತ್ತು. ಕೂಡಲೇ ಅವರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.</p>.<p>ಕೀಲುಮೂಳೆ ತಜ್ಞ ಡಾ.ನಿತಿನ್ ಅವರು ಶಸ್ತ್ರಚಿಕಿತ್ಸೆ ನಡೆಸಿ, ಕೃತಕ ಕೀಲನ್ನು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾಗಿ ಏಳು ದಿನಗಳಾಗಿದ್ದು, ಮೂರು ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.</p>.<p>ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಜಾನಕಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡ ಮಕ್ಕಳ ಪ್ರೀತಿಯಿಂದ ನಾನು ಆರೋಗ್ಯವಂತಳಾಗಿದ್ದೇನೆ. ಅಭಿಮಾನಿಗಳಿಗಾಗಿ ನಾನು ಚನ್ನಾಗಿರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ಹೊಸ್ತಿಲು ಮುಗ್ಗರಿಸಿ ಬಿದ್ದಾಗ ತುಂಬಾ ನೋವಾಯಿತು. ವೈದ್ಯರು ನನ್ನ ಕೀಲು ತೆಗೆದು, ಕೃತಕ ಕೀಲು ಜೋಡಿಸಿದ್ದಾರೆ. ನನಗಿದು ಹೊಸ ಅನುಭವ’ ಎಂದು ಜಾನಕಿ ತಾವೇ ಉತ್ಸಾಹದಿಂದಲೇ ವಿವರ ನೀಡಿದರು.</p>.<p class="Briefhead"><strong>ಕಿಡಿ ಕಾರಿದ ಪುತ್ರ ಮುರಳಿ ಕೃಷ್ಣ</strong></p>.<p>‘ಒಂದು ವಾರದಿಂದ ವಿಚಾರ ಗೌಪ್ಯವಾಗಿಟ್ಟಿದ್ದೆವು. ಈ ಸುದ್ದಿ ಮಾಧ್ಯಮದವರಿಗೆ ಸಿಕ್ಕಿದ್ದು ಹೇಗೆ?’ ಎಂದು ಎನ್.ಜಾನಕಿ ಪುತ್ರ, ಸಂಗೀತ ನಿರ್ದೇಶಕ ಮುರಳಿ ಕೃಷ್ಣ ಕಿರಿಕಾರಿದರು.</p>.<p>ಸುದ್ದಿ ಕೊಟ್ಟಿದ್ದು ಯಾರೆಂದು ತಿಳಿಸುವಂತೆ ಮುರಳಿ ಒತ್ತಾಯಿಸಿದರು. ಮಾಧ್ಯಮದವರು ಇದಕ್ಕೆ ನಿರಾಕರಿಸಿದರು. ‘ಹೀಗೆ ಹೇಳಿದರೆ ಹೇಗೆ. ನಾನು ನನ್ನ ತಾಯಿಯನ್ನು ಮಾತನಾಡಿಸಲು ನಿಮಗೆ ಅವಕಾಶ ಕೊಡದೇ ಇರಬಹುದು ಅಲ್ಲವೇ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>