ಪ್ರಶಸ್ತಿಗೆ ಆಯ್ಕೆ: ಮೈಸೂರಿನ ಎಲ್.ಶಿವಲಿಂಗಪ್ಪ (ವರ್ಣಚಿತ್ರ ಕಲೆ), ರತ್ನಾ ಬಿ.ಶೆಟ್ಟಿ (ವಿಶೇಷ ಮಕ್ಕಳ ಸಬಲೀಕರಣ ಸೇವೆ), ಡಿ.ಮಾದೇಗೌಡ (ಸಮಾಜಸೇವೆ), ಬಿ.ಎಸ್.ಹರೀಶ್ (ಪತ್ರಿಕೋದ್ಯಮ), ಶ್ರೀಧರರಾಜೇ ಅರಸು (ಶಿಕ್ಷಣ), ಮಂಡ್ಯದ ಕೆ.ಪಿ.ಅರುಣಾಕುಮಾರಿ (ರೋಗಿಗಳ ಶುಶ್ರೂಷೆ–ಮಮತೆಯ ಮಡಿಲು), ಚಾಮರಾಜನಗರದ ಮಲೆಯೂರು ಗುರುಸ್ವಾಮಿ (ಸಾಹಿತ್ಯ), ಸಿ.ಎಂ.ನರಸಿಂಹಮೂರ್ತಿ (ಜಾನಪದ), ಹಾಸನದ ಜಿ.ಮಹಾಂತಪ್ಪ (ಸಮಾಜಸೇವೆ) ಮತ್ತು ಮೈಸೂರಿನ ‘ಶಕ್ತಿಧಾಮ’ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಸ್ಮರಣಿಕೆ ಹಾಗೂ ಸನ್ಮಾನವನ್ನು ಒಳಗೊಂಡಿದೆ.