ಉತ್ತರ ಕೇಳಿ ಕೋಪಗೊಂಡ ಅಶೋಕ್, ‘ಈ ರೀತಿ ಉತ್ತರಿಸಿದರೆ ಓಡಿಸಿಬಿಡುತ್ತೇನೆ. ಸಾವು ಸಾವೇ ಅಲ್ಲವೇ? ಒಂದು ವೇಳೆ ನೆರೆ ಬಾರದೇ ಇದ್ದಿದ್ದರೆ ಅವರ ಸಾವು ಉಂಟಾಗುತ್ತಿತ್ತೇ ಎಂದು ಪ್ರಶ್ನಿಸಿದರು. ನಿಮ್ಮ ಅಧೀಕ್ಷಕ ಎಂಜಿನಿಯರ್ ಸಭೆಗೆ ಬಂದಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದೇ ಹೋದರೆ ಎತ್ತಂಗಡಿ ಮಾಡಿಬಿಡುತ್ತೇನೆ’ ಎಂದು ಗದರಿದರು.