ಮೈಸೂರು– ಬೆಂಗಳೂರು ರಸ್ತೆ ಸಂಚಾರವನ್ನು ಇಲ್ಲಿ ಬಂದ್ ಮಾಡಲಾಗಿತ್ತು. ರಸ್ತೆಗೆ ಜಾತ್ರೆಯ ರಂಗು ತುಂಬಿತ್ತು. ಒದ್ದೆಬಟ್ಟೆಯುಟ್ಟ ಹಲವು ಮಂದಿ ಹುತ್ತಕ್ಕೆ ಹಾಗೂ ನಾಗರಕಲ್ಲುಗಳಿಗೆ ಹಾಲೆರೆದರು. ಬೆಣ್ಣೆ, ನಾಗರ, ಬಾಳೆಹಣ್ಣು, ಎಲೆ, ಅಡಿಕೆ, ಹೂ ಅಗರಬತ್ತಿ, ಕರ್ಪೂರ ಸೇರಿದಂತೆ ವಿವಿಧ ಬಗೆಯ ಪೂಜಾಸಾಮಗ್ರಿಗಳನ್ನು ಅರ್ಪಿಸಿದರು.