<p><strong>ಪಿರಿಯಾಪಟ್ಟಣ (ಮೈಸೂರು ಜಿಲ್ಲೆ):</strong> ‘ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದ ಪ್ರಸಂಗ ಶನಿವಾರ ಇಲ್ಲಿ ನಡೆಯಿತು.</p><p>ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಭಾಷಣ ಮಾಡುವ ವೇಳೆಗೆ ಕುರ್ಚಿಗಳು ಖಾಲಿಯಾಗಿದ್ದವು.</p><p>ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಶುರುವಾದಾಗ ಮಧ್ಯಾಹ್ನ 2.50 ಸಮೀಪಿಸಿತ್ತು. ಸಿದ್ದರಾಮಯ್ಯ ಭಾಷಣ ಆರಂಭಿಸಿದಾಗ ಸಂಜೆ 4.20 ಆಗಿತ್ತು. ಆ ವೇಳೆಗೆ ಬಹಳಷ್ಟು ಜನರು ಹೋಗಿದ್ದರು.</p><p>ಇದನ್ನು ಭಾಷಣದ ನಡುವೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಬೆಳಿಗ್ಗೆ 11ಕ್ಕೆ ಬರುವಂತೆ ವೆಂಕಟೇಶ್ ನಮಗೆಲ್ಲಾ ಹೇಳಿದ್ದರು. ಆದರೆ, ನಾನು ಮೈಸೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಮುಗಿಸಿ, ಊಟ ಮಾಡಿ ಬರಲು ತಡವಾಯಿತು. ಜನರೂ ತಾನೆ ಎಷ್ಟೊತ್ತು ಕೂರುತ್ತಾರಲ್ಲವೇ? ಎಂದರು.</p><p>ಆಗ ಅಭಿಮಾನಿಯೊಬ್ಬರು, ‘ಮಾತನಾಡಿ ಸರ್’ ಎಂದರು. ‘ನೀನ್ಹೇಳ್ತಿಯಾ ಕಣಯ್ಯಾ? ಹಿಂದೆ ನೋಡಿದ್ದೀಯಾ, ಬಹುತೇಕರು ಹೋಗಿಬಿಟ್ಟಿದ್ದಾರೆ. ಖಾಲಿ ಕುರ್ಚಿಗೆ ಭಾಷಣ ಮಾಡಲೇ? ನಾನೀಗ ಹೆಚ್ಚು ಮಾತನಾಡಿದರೆ ಚೆನ್ನಾಗಿರುವುದಿಲ್ಲ’ ಎಂದು ಹೇಳಿ ಭಾಷಣ ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿರಿಯಾಪಟ್ಟಣ (ಮೈಸೂರು ಜಿಲ್ಲೆ):</strong> ‘ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದ ಪ್ರಸಂಗ ಶನಿವಾರ ಇಲ್ಲಿ ನಡೆಯಿತು.</p><p>ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಭಾಷಣ ಮಾಡುವ ವೇಳೆಗೆ ಕುರ್ಚಿಗಳು ಖಾಲಿಯಾಗಿದ್ದವು.</p><p>ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಶುರುವಾದಾಗ ಮಧ್ಯಾಹ್ನ 2.50 ಸಮೀಪಿಸಿತ್ತು. ಸಿದ್ದರಾಮಯ್ಯ ಭಾಷಣ ಆರಂಭಿಸಿದಾಗ ಸಂಜೆ 4.20 ಆಗಿತ್ತು. ಆ ವೇಳೆಗೆ ಬಹಳಷ್ಟು ಜನರು ಹೋಗಿದ್ದರು.</p><p>ಇದನ್ನು ಭಾಷಣದ ನಡುವೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಬೆಳಿಗ್ಗೆ 11ಕ್ಕೆ ಬರುವಂತೆ ವೆಂಕಟೇಶ್ ನಮಗೆಲ್ಲಾ ಹೇಳಿದ್ದರು. ಆದರೆ, ನಾನು ಮೈಸೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಮುಗಿಸಿ, ಊಟ ಮಾಡಿ ಬರಲು ತಡವಾಯಿತು. ಜನರೂ ತಾನೆ ಎಷ್ಟೊತ್ತು ಕೂರುತ್ತಾರಲ್ಲವೇ? ಎಂದರು.</p><p>ಆಗ ಅಭಿಮಾನಿಯೊಬ್ಬರು, ‘ಮಾತನಾಡಿ ಸರ್’ ಎಂದರು. ‘ನೀನ್ಹೇಳ್ತಿಯಾ ಕಣಯ್ಯಾ? ಹಿಂದೆ ನೋಡಿದ್ದೀಯಾ, ಬಹುತೇಕರು ಹೋಗಿಬಿಟ್ಟಿದ್ದಾರೆ. ಖಾಲಿ ಕುರ್ಚಿಗೆ ಭಾಷಣ ಮಾಡಲೇ? ನಾನೀಗ ಹೆಚ್ಚು ಮಾತನಾಡಿದರೆ ಚೆನ್ನಾಗಿರುವುದಿಲ್ಲ’ ಎಂದು ಹೇಳಿ ಭಾಷಣ ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>