ಟೊಳ್ಳಾಗಿರುವುದನ್ನು ಗುರುತಿಸುವಲ್ಲಿ ಪಾಲಿಕೆ ವಿಫಲ: ಜುಲೈ 7ರಂದು ಇದೇ ರಸ್ತೆಯಲ್ಲಿ ಪಾಲಿಕೆಯು ಅಪಾಯದಂಚಿ
ನಲ್ಲಿರುವ ಮರಗಳನ್ನು ಗುರುತಿಸುವ ಕಾರ್ಯ ಆರಂಭಿಸಿತ್ತು. ಹಲವು ಮರಗಳ ರೆಂಬೆ, ಕೊಂಬೆಗಳನ್ನೂ ಕಡಿಯಲಾಗಿತ್ತು. ಆದರೆ, ಈ ಮರವು ಬೀಳುವ ಹಂತದಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ಪಾಲಿಕೆ ಸಿಬ್ಬಂದಿ ವಿಫಲರಾಗಿದ್ದರು. ಇದರಿಂದಾಗಿಯೇ ಮರವು ಉರುಳಿದೆ. ಒಂದು ವೇಳೆ ಮಧ್ಯಾಹ್ನದ ವೇಳೆಯಾಗಿದ್ದ ಜನರು ಮರದಡಿ ಸಿಲುಕುವ ಅಪಾಯ ಇತ್ತು ಎಂದು ಸಮೀಪದ ಅಂಗಡಿಯೊಂದರ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.