ಇವರು ಹೆಚ್ಚಾಗಿ ದೇವಸ್ಥಾನಗಳು, ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಜತೆಗೆ, ದ್ವಿಚಕ್ರ ವಾಹನಗಳನ್ನೂ ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಬಿ.ಟಿ ಕವಿತಾ ಅವರು ಈ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ದೇವರಾಜ ವಿಭಾಗದ ಎಸಿಪಿ ಜಿ.ಎಸ್.ಗಜೇಂದ್ರಪ್ರಸಾದ್ ಅವರ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್, ಪಿ.ಎಸ್.ಐ. ಎಂ.ಜೈಕೀರ್ತಿ, ಪ್ರೊಬೆಷನರಿ ಪಿಎಸ್ಐ ಮಹೇಂದ್ರ, ಎ.ಎಸ್.ಐ ಸಿದ್ದರಾಜು, ಸಿಬ್ಬಂದಿಯಾದ ಬಾಬು, ಶಂಕರ್, ದಿವಾಕರ್, ಸಿದ್ದಿಕ್ ಅಹಮದ್, ಕೃಷ್ಣ, ಮಂಜುನಾಥ್, ಮೋಹನ್ಕುಮಾರ್, ಭೀಮವ್ವ ಕಾಲವಾಡ, ಮಾಲತಿ ಕಾರ್ಯಾಚರಣೆ ನಡೆಸಿದ್ದರು.