<p><strong>ಹಂಪಾಪುರ</strong>: ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಹಲವು ಕಡೆಗಳಲ್ಲಿ ಜನರ ಬಿಸಿಲಿನ ಬೇಗೆ ನಿವಾರಿಸಲು ಕಲ್ಲಂಗಡಿ, ತಂಪು ಪಾನೀಯ, ಎಳನೀರು ಮತ್ತು ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ.</p>.<p>ಚಳಿ ಮುಗಿದು ಶಿವರಾತ್ರಿ ಸುಡುಬಿಸಿಲು ಏರುತ್ತಿದ್ದಂತೆ ಬಿಸಿಲ ಬೇಗೆ ಕೂಡ ಹೆಚ್ಚುತ್ತಿದ್ದು, ಹೀಗಾಗಿ ಬಿಸಿಲಿನ ದಾಹ ನೀಗಿಸುವ ಕಲ್ಲಂಗಡಿ ಮತ್ತು ಎಳನೀರಿನ ವ್ಯಾಪಾರ ಮೈಸೂರು- ಮಾನಂದವಾಡಿ ರಸ್ತೆ ಬದಿ ಮತ್ತು ವಿವಿಧ ಕಡೆಗಳಲ್ಲಿ ಜೋರಾಗಿದೆ. </p>.<p>ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಕಲ್ಲಂಗಡಿ ಈ ಬಾರಿ ಫೆಬ್ರುವರಿಯಲ್ಲೇ ಬಂದಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚುತ್ತಿದೆ. ಅಂಗಡಿಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.</p>.<p>ಒಂದು ಕೆ.ಜಿ ಕಲ್ಲಂಗಡಿ ₹25-₹30ಕ್ಕೆ ಮಾರಾಟವಾಗುತ್ತಿದ್ದು, ಪಟ್ಟಣದ ಅಂಗಡಿಗಳಲ್ಲಿ ಕತ್ತರಿಸಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಜನರು ಗುಂಪು ಗುಂಪಾಗಿ ಬಂದು ಹಣ್ಣನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.</p>.<p>‘ಹೆಚ್ಚು ತಂಪು, ನೀರಿನ ಅಂಶ ಹೊಂದಿರುವುದರಿಂದ ಜನರು ಕಲ್ಲಂಗಡಿಯನ್ನು ಸೇವಿಸಿ ಬೇಸಿಗೆಯನ್ನು ನೀಗಿಸಿಕೊಳ್ಳಬಹುದು’ ಎನ್ನುತ್ತಾರೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಟಿ. ರವಿಕುಮಾರ್.</p>.<p>ಮೂರ್ನಾಲ್ಕು ತಿಂಗಳಿಂದ ಚಳಿಯಿಂದ ನಡುಗುತ್ತಿದ್ದ ಜನ ಈಗ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಇದನ್ನು ಗಮನಿಸಿದ ಹಣ್ಣಿನ ವ್ಯಾಪಾರಿಗಳು ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿಯನ್ನು ಖರೀದಿಸಿ ತಂದು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಎಳನೀರು ಹಾಗೂ ತಂಪು ಪಾನೀಯಗಳ ಮಾರಾಟಗಾರರು ಬಸ್ ನಿಲ್ದಾಣ, ಪ್ರಮುಖ ವೃತ್ತಗಳು ಮತ್ತು ಜನರು ಹೆಚ್ಚು ಓಡಾಡುವ ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ.</p>.<p>‘ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಕೆಲ ರೈತರು ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದು, ಗ್ರಾಹಕರ ಬೇಡಿಕೆ ಪೂರೈಸಲು ಮೈಸೂರಿನ ಮಾರುಕಟ್ಟೆಯಲ್ಲಿ ಕಲ್ಲಂಗಡಿಯನ್ನು ಖರೀದಿಸಿ ತರುತ್ತಿದ್ದೇವೆ’ ಎಂದು ಕಲ್ಲಂಗಡಿ ಹಣ್ಣಿನ ಅಂಗಡಿ ವ್ಯಾಪಾರಿ ಅಕ್ಬರ್ ತಿಳಿಸಿದರು.</p>.<p>ಎಳನೀರು ವ್ಯಾಪಾರಿ ಹರೀಶ್ ಮಾತನಾಡಿ 'ಸ್ಥಳೀಯವಾಗಿ ರೈತರ ಬಳಿ ಎಳನೀರನ್ನು ಖರೀದಿಸುತ್ತಿದ್ದು, ತೆಂಗು ಬೆಳೆದ ರೈತರಿಗೂ ಲಾಭ ದೊರೆಯುವಂತೆ ಹಣ ನೀಡಿ ಖರೀದಿಸುತ್ತಿದ್ದೇವೆ’ ಎಂದರು.</p>.<p> ಎಚ್.ಡಿ.ಕೋಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆ ಎಳನೀರು ಖರೀದಿಯಿಂದ ರೈತರಿಗೂ ಅನುಕೂಲ ಒಂದು ಕೆ.ಜಿ. ಕಲ್ಲಂಗಡಿ ₹35–₹40ಕ್ಕೆ ಮಾರಾಟ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ</strong>: ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಹಲವು ಕಡೆಗಳಲ್ಲಿ ಜನರ ಬಿಸಿಲಿನ ಬೇಗೆ ನಿವಾರಿಸಲು ಕಲ್ಲಂಗಡಿ, ತಂಪು ಪಾನೀಯ, ಎಳನೀರು ಮತ್ತು ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ.</p>.<p>ಚಳಿ ಮುಗಿದು ಶಿವರಾತ್ರಿ ಸುಡುಬಿಸಿಲು ಏರುತ್ತಿದ್ದಂತೆ ಬಿಸಿಲ ಬೇಗೆ ಕೂಡ ಹೆಚ್ಚುತ್ತಿದ್ದು, ಹೀಗಾಗಿ ಬಿಸಿಲಿನ ದಾಹ ನೀಗಿಸುವ ಕಲ್ಲಂಗಡಿ ಮತ್ತು ಎಳನೀರಿನ ವ್ಯಾಪಾರ ಮೈಸೂರು- ಮಾನಂದವಾಡಿ ರಸ್ತೆ ಬದಿ ಮತ್ತು ವಿವಿಧ ಕಡೆಗಳಲ್ಲಿ ಜೋರಾಗಿದೆ. </p>.<p>ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಕಲ್ಲಂಗಡಿ ಈ ಬಾರಿ ಫೆಬ್ರುವರಿಯಲ್ಲೇ ಬಂದಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚುತ್ತಿದೆ. ಅಂಗಡಿಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.</p>.<p>ಒಂದು ಕೆ.ಜಿ ಕಲ್ಲಂಗಡಿ ₹25-₹30ಕ್ಕೆ ಮಾರಾಟವಾಗುತ್ತಿದ್ದು, ಪಟ್ಟಣದ ಅಂಗಡಿಗಳಲ್ಲಿ ಕತ್ತರಿಸಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಜನರು ಗುಂಪು ಗುಂಪಾಗಿ ಬಂದು ಹಣ್ಣನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.</p>.<p>‘ಹೆಚ್ಚು ತಂಪು, ನೀರಿನ ಅಂಶ ಹೊಂದಿರುವುದರಿಂದ ಜನರು ಕಲ್ಲಂಗಡಿಯನ್ನು ಸೇವಿಸಿ ಬೇಸಿಗೆಯನ್ನು ನೀಗಿಸಿಕೊಳ್ಳಬಹುದು’ ಎನ್ನುತ್ತಾರೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಟಿ. ರವಿಕುಮಾರ್.</p>.<p>ಮೂರ್ನಾಲ್ಕು ತಿಂಗಳಿಂದ ಚಳಿಯಿಂದ ನಡುಗುತ್ತಿದ್ದ ಜನ ಈಗ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಇದನ್ನು ಗಮನಿಸಿದ ಹಣ್ಣಿನ ವ್ಯಾಪಾರಿಗಳು ಹೆಚ್ಚು ಬೇಡಿಕೆ ಇರುವ ಕಲ್ಲಂಗಡಿಯನ್ನು ಖರೀದಿಸಿ ತಂದು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಎಳನೀರು ಹಾಗೂ ತಂಪು ಪಾನೀಯಗಳ ಮಾರಾಟಗಾರರು ಬಸ್ ನಿಲ್ದಾಣ, ಪ್ರಮುಖ ವೃತ್ತಗಳು ಮತ್ತು ಜನರು ಹೆಚ್ಚು ಓಡಾಡುವ ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ.</p>.<p>‘ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಕೆಲ ರೈತರು ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದು, ಗ್ರಾಹಕರ ಬೇಡಿಕೆ ಪೂರೈಸಲು ಮೈಸೂರಿನ ಮಾರುಕಟ್ಟೆಯಲ್ಲಿ ಕಲ್ಲಂಗಡಿಯನ್ನು ಖರೀದಿಸಿ ತರುತ್ತಿದ್ದೇವೆ’ ಎಂದು ಕಲ್ಲಂಗಡಿ ಹಣ್ಣಿನ ಅಂಗಡಿ ವ್ಯಾಪಾರಿ ಅಕ್ಬರ್ ತಿಳಿಸಿದರು.</p>.<p>ಎಳನೀರು ವ್ಯಾಪಾರಿ ಹರೀಶ್ ಮಾತನಾಡಿ 'ಸ್ಥಳೀಯವಾಗಿ ರೈತರ ಬಳಿ ಎಳನೀರನ್ನು ಖರೀದಿಸುತ್ತಿದ್ದು, ತೆಂಗು ಬೆಳೆದ ರೈತರಿಗೂ ಲಾಭ ದೊರೆಯುವಂತೆ ಹಣ ನೀಡಿ ಖರೀದಿಸುತ್ತಿದ್ದೇವೆ’ ಎಂದರು.</p>.<p> ಎಚ್.ಡಿ.ಕೋಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆ ಎಳನೀರು ಖರೀದಿಯಿಂದ ರೈತರಿಗೂ ಅನುಕೂಲ ಒಂದು ಕೆ.ಜಿ. ಕಲ್ಲಂಗಡಿ ₹35–₹40ಕ್ಕೆ ಮಾರಾಟ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>