<p><strong>ಮದ್ದೂರು:</strong> ವರ್ಷಕೊಮ್ಮೆ ಕೇವಲ 36 ಗಂಟೆಗಳ ಕಾಲ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹೆಮ್ಮನಹಳ್ಳಿಯ ಶಕ್ತಿದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಗುರುವಾರ ಆರಂಭಗೊಂಡಿತು.</p>.<p>ಬುಧವಾರ ಸಂಜೆಯಿಂದ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ಚಂಡಿಕಾ ಮಹಾಯಾಗ ಆರಂಭಗೊಂಡಿತು. ಗಣಪತಿಪೂಜೆ, ಗಂಗಾಪೂಜೆ, ಸ್ವಸ್ತಿರಾಶೋಗ್ನ ಹೋಮ, ವಾಚನ, ಪುಣ್ಯಾಹ, ಪಂಚಗವ್ಯ, ರಕ್ಷಾಬಂಧನ, ದೇವಿಕ ಆರ್ಚನೆ, ಜಪಪಾರಾಯಣ, ಅಗ್ನಿ ಪ್ರತಿಷ್ಠೆಯೊಂದಿಗೆ ಮಹಾಮಂಗಳಾರತಿ ನಡೆಯಿತು.</p>.<p>ಗುರುವಾರ ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಕಳೆದ ವರ್ಷ ಮುಚ್ಚಲಾಗಿದ್ದ ಅಮೃತ ಮಣ್ಣಿನ ದ್ವಾರವನ್ನು ತೆರೆಯಲಾಯಿತು. ಕಳೆದ ವರ್ಷ ಹಚ್ಚಿ ಇಡಲಾಗಿದ್ದ ನಂದಾದೀಪದ ಬೆಳಕಿನಲ್ಲಿ ಚೌಡೇಶ್ವರಿದೇವಿಯ ದರ್ಶನವನ್ನು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಪಡೆದರು.</p>.<p>ರಾಜ್ಯದ ವಿವಿಧೆಡೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಚೌಡೇಶ್ವರಿ ದೇಗುಲ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ಸಂಜೆ 4ಗಂಟೆಗೆ ಗ್ರಾಮದ ಯುವಕರಿಂದ ಆಕರ್ಷಕ ಬಂಡಿ ಉತ್ಸವ ನಡೆಯಿತು. ಬಂಡಿಗಳ ಮೂಲಕ ಗ್ರಾಮಸ್ಥರು ದೇವಿಯ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ತಂದು ದೇಗುಲದ ಮುಂಭಾಗದಲ್ಲಿ ಪೇರಿಸಿದರು. ಸಂಜೆ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾ ಕೈಂಕರ್ಯಗಳು ನಡೆಯಿತು.</p>.<p><strong>ಜಾತ್ರೆಯಲ್ಲಿ ಇಂದು: </strong>ಶುಕ್ರವಾರ ಮುಂಜಾನೆ ಚೌಡೇಶ್ವರಿದೇವಿಯ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ ದೇವಿಯ ದಿವ್ಯ ಮಹಾರಥೋತ್ಸವ ನಡೆಯಲಿದ್ದು, ರಾತ್ರಿ12ಗಂಟೆಗೆ ದೇವಿಯ ಗರ್ಭಗುಡಿಯಲ್ಲಿ ನಂದಾದೀಪವನ್ನು ಹಚ್ಚಿ, ಗರ್ಭಗುಡಿಯನ್ನು ಎಳನೀರಿನಿಂದ ಕಲೆಸಿದ ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರೆಗೆ ಅಂತಿಮ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ವರ್ಷಕೊಮ್ಮೆ ಕೇವಲ 36 ಗಂಟೆಗಳ ಕಾಲ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹೆಮ್ಮನಹಳ್ಳಿಯ ಶಕ್ತಿದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಉದ್ಘೋಷಗಳ ನಡುವೆ ಗುರುವಾರ ಆರಂಭಗೊಂಡಿತು.</p>.<p>ಬುಧವಾರ ಸಂಜೆಯಿಂದ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ಚಂಡಿಕಾ ಮಹಾಯಾಗ ಆರಂಭಗೊಂಡಿತು. ಗಣಪತಿಪೂಜೆ, ಗಂಗಾಪೂಜೆ, ಸ್ವಸ್ತಿರಾಶೋಗ್ನ ಹೋಮ, ವಾಚನ, ಪುಣ್ಯಾಹ, ಪಂಚಗವ್ಯ, ರಕ್ಷಾಬಂಧನ, ದೇವಿಕ ಆರ್ಚನೆ, ಜಪಪಾರಾಯಣ, ಅಗ್ನಿ ಪ್ರತಿಷ್ಠೆಯೊಂದಿಗೆ ಮಹಾಮಂಗಳಾರತಿ ನಡೆಯಿತು.</p>.<p>ಗುರುವಾರ ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಕಳೆದ ವರ್ಷ ಮುಚ್ಚಲಾಗಿದ್ದ ಅಮೃತ ಮಣ್ಣಿನ ದ್ವಾರವನ್ನು ತೆರೆಯಲಾಯಿತು. ಕಳೆದ ವರ್ಷ ಹಚ್ಚಿ ಇಡಲಾಗಿದ್ದ ನಂದಾದೀಪದ ಬೆಳಕಿನಲ್ಲಿ ಚೌಡೇಶ್ವರಿದೇವಿಯ ದರ್ಶನವನ್ನು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಪಡೆದರು.</p>.<p>ರಾಜ್ಯದ ವಿವಿಧೆಡೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಚೌಡೇಶ್ವರಿ ದೇಗುಲ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ಸಂಜೆ 4ಗಂಟೆಗೆ ಗ್ರಾಮದ ಯುವಕರಿಂದ ಆಕರ್ಷಕ ಬಂಡಿ ಉತ್ಸವ ನಡೆಯಿತು. ಬಂಡಿಗಳ ಮೂಲಕ ಗ್ರಾಮಸ್ಥರು ದೇವಿಯ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ತಂದು ದೇಗುಲದ ಮುಂಭಾಗದಲ್ಲಿ ಪೇರಿಸಿದರು. ಸಂಜೆ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾ ಕೈಂಕರ್ಯಗಳು ನಡೆಯಿತು.</p>.<p><strong>ಜಾತ್ರೆಯಲ್ಲಿ ಇಂದು: </strong>ಶುಕ್ರವಾರ ಮುಂಜಾನೆ ಚೌಡೇಶ್ವರಿದೇವಿಯ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ ದೇವಿಯ ದಿವ್ಯ ಮಹಾರಥೋತ್ಸವ ನಡೆಯಲಿದ್ದು, ರಾತ್ರಿ12ಗಂಟೆಗೆ ದೇವಿಯ ಗರ್ಭಗುಡಿಯಲ್ಲಿ ನಂದಾದೀಪವನ್ನು ಹಚ್ಚಿ, ಗರ್ಭಗುಡಿಯನ್ನು ಎಳನೀರಿನಿಂದ ಕಲೆಸಿದ ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರೆಗೆ ಅಂತಿಮ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>