ಸೋಮವಾರ (ಮಾರ್ಚ್ 5) ಮತ್ತು ಮಂಗಳವಾರ (ಮಾರ್ಚ್ 6) ಮುಖ್ಯಮಂತ್ರಿ ಅವರ ಮೈಸೂರು ಭೇಟಿ ನಿಗದಿಯಾಗಿತ್ತು. ಎರಡು ದಿನಗಳ ಭೇಟಿಯನ್ನು ಒಂದು ದಿನಕ್ಕೆ ಮೊಟಕುಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಮೈಸೂರು ತಾಲ್ಲೂಕಿನ ಜಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.