ಶಿವಮೊಗ್ಗ: ನಮ್ಮ ಟೀಮ್ಡಿ.5 ಮತ್ತು 6ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದೆ.
ಕಲಾವಿದ ಮಂಜು ಅವರ ನೆನಪಿನಲ್ಲಿ ಎರಡು ದಿನದ ನಾಟಕೋತ್ಸವ ನಡೆಯಲಿದೆ. ಡಿ.5ರಂದು ಮಹಾದೇವ ಹಡಪದ ಸಾಲಾಪುರ ಅವರ ನಿರ್ದೇಶನದ ಲೋಕಾಪುರ ಅವರು ರಚಿಸಿರುವ ಹಾಸ್ಯ ನಾಟಕ ‘ಸಂಕಾನಟ್ಟಿ ಚಂದ್ರಿ’ ಡಿ.6ರಂದು ಅಪೂರ್ವ ಅನಗಳ್ಳಿ ನಿರ್ದೇಶನದ‘ಒಂದು ಲೋಕ ಕಥೆ’ ನಾಟಕ ಪ್ರದರ್ಶನಗೊಳ್ಳಲಿದೆ. ಎರಡು ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಆರಂಭಗೊಳ್ಳುತ್ತವೆ. ಒಂದು ನಾಟಕಕ್ಕೆ₹ 50 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದುನಮ್ ಟೀಮ್ಪ್ರದಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ನಮ್ ಟೀಮ್ಎರಡು ದಶಕಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿದೆ. ಸುಮಾರು 38ಕ್ಕೂ ಹೆಚ್ಚು ನಾಟಕಗಳನ್ನುಪ್ರದರ್ಶಿಸಿದೆ.98ಕ್ಕೂ ಹೆಚ್ಚು ಆಹ್ವಾನಿತ ನಾಟಕಗಳಿಗೆ ಪ್ರೋತ್ಸಾಹ ನಿಡಿದೆ.ಡಿ.5 ಮತ್ತು 6 ರಂದು ನಡೆಯಲಿರುವ ನಾಟಕಗಳು ಆಹ್ವಾನಿತ 99 ಹಾಗೂ 100ನೇ ನಾಟಕಗಳುಎಂದರು.
ಮಂಜಣ್ಣ ನಾಟಕ ತಂಡಗಳಿಗೆ ನೆರವಾಗಿದ್ದರು. ಅವರು ರೂಪಿಸಿದ್ದ ವೇದಿಕೆಗಳು ಇಂದು ನೆನಪಿನಲ್ಲಿವೆ. ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೀ ಅವಕಾಶ ಕಲ್ಪಿಸಲಾಗಿದೆ. ಅವರ ಒಡನಾಡಿಗಳು ಇದರಲ್ಲಿ ಭಾಗವಹಿಸುತ್ತಾರೆ. ಡಿ.6ರಂದು ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಮ್ಟೀಮ್ನ ಸುಂದರೇಶ್, ಸುರೇಶ್, ಚಂದನ, ವಿಜಯಕುಮಾರ್ ಇದ್ದರು.